ಗಂಧ, ಮರಮುಟ್ಟುಗಳ ಕಳ್ಳಸಾಗಾಣಿಕೆಯ ವಿರುದ್ಧ ಬಿಗಿ ಕ್ರಮಕ್ಕೆ ಆಗ್ರಹ
ಬೆಂಗಳೂರು, ಜುಲೈ 12– ಅರಣ್ಯಗಳಿಂದ ಗಂಧ ಮುಂತಾದ ಬೆಲೆಬಾಳುವ ಮರಗಳ ಕಳ್ಳ ಸಾಗಾಣಿಕೆ ನಡೆಯುತ್ತಿರುವುದನ್ನು ತಡೆಗಟ್ಟಲು ಬಿಗುವಾದ ಕ್ರಮ ಕೈಗೊಳ್ಳಬೇಕಂದು ವಿಧಾನಸಭೆಯಲ್ಲಿ ಇಂದು ಸದಸ್ಯರು ಒತ್ತಾಯ ಪಡಿಸಿದರು.
ಕೃಷಿ, ಅರಣ್ಯ, ಪಶುಸಂಗೋಪನೆ ಇಲಾಖೆಗಳಿಗೆ ಸಂಬಂಧಿಸಿದ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಸದಸ್ಯರಲ್ಲಿ ಅನೇಕ ಮಂದಿ, ಮರಗಳ ಕಳ್ಳ ಸಾಗಾಣಿಕೆ ಭಾರಿ ಪ್ರಮಾಣದಲ್ಲಿ ನಡಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಖಾಸಗಿ ನರ್ಸಿಂಗ್ ಹೋಂ ವಿಧೇಯಕ
ಬೆಂಗಳೂರು ಜುಲೈ 12– ಖಾಸಗಿ ನರ್ಸಿಂಗ್ ಹೋಂಗಳನ್ನು ಕೆಲ ನಿಯಮಗಳಿಗೆ ಒಳಪಡಿಸುವ ವಿಧೇಯಕವನ್ನು ಸರ್ಕಾರ ಸಿದ್ಧ ಮಾಡಿದೆ.
ಆರೋಗ್ಯ ಇಲಾಖೆಯ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಇಂದು ವಿಧಾನಸಭೆಯಲ್ಲಿ ಉತ್ತರ ನೀಡಿದ ಆರೋಗ್ಯ ಸಚಿವ ಶ್ರೀ ಎಚ್. ಸಿದ್ದವೀರಪ್ಪ ಅವರು ಖಾಸಗಿ ನರ್ಸಿಂಗ್ ಹೋಂಗಳನ್ನು ಕೆಲ ಹತೋಟಿಗೆ ಒಳಪಡಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.