ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ ಜೂನ್‌ 12, 1971

Last Updated 11 ಜೂನ್ 2021, 19:30 IST
ಅಕ್ಷರ ಗಾತ್ರ

ಗಗನಯಾನದಲ್ಲಿ ರಕ್ತಪರೀಕ್ಷೆ

ಮಾಸ್ಕೊ, ಜೂನ್ 11– ಭಾರರಾಹಿತ್ಯದಿಂದ ತಮ್ಮ ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿದೆಯೇ ಎಂಬುದನ್ನು ಕಂಡು ಹಿಡಿಯಲು, ಸೋಯುಜ್–ಸಲ್ಯೂಟ್ ಅಂತರಿಕ್ಷ ಪ್ರಯೋಗಾಲಯದಲ್ಲಿರುವ ಮೂವರು ರಷ್ಯನ್ ಗಗನಯಾತ್ರಿಗಳು ಇಂದು ತಮ್ಮ ಮೇಲೆ ಪ್ರಯೋಗ ನಡೆಸಿದರು.

ಅಂತರಿಕ್ಷದಲ್ಲಿ ಕಾಯಂ ನಿಲ್ದಾಣ ನಿರ್ಮಿಸಲು ಅಡ್ಡಿಯಾಗಿರುವ ಸಮಸ್ಯೆಗಳ ಲ್ಲೊಂದಾದ ಭಾರರಾಹಿತ್ಯ ಕುರಿತು ಕೂಲಂಕಷ ಅಧ್ಯಯನ ಈ ಯಾನದಲ್ಲಿ ನಡೆಯಲಿದೆ.

‘ತ್ವರಿತ ಸರ್ಕಾರಿ ಕಾರ್ಯಕ್ಕೆ ಮಾಯ ಮಾಟ ಬೇಕಿಲ್ಲ’

ಬೆಂಗಳೂರು, ಜೂನ್ 11–ಸರ್ಕಾರದ ಕೆಲವು ಕಾರ್ಯಗಳು ತ್ವರಿತವಾಗಿ ನಡೆಯಲು ಯಾವ ‘ಮಾಯಮಂತ್ರ’ವೂ ಇಲ್ಲ. ಭೂ ಸುಧಾರಣೆಗಳ ತ್ವರಿತ ಕಾರ್ಯಾಚರಣೆಗಾಗಿ ಅಧಿಕಾರಿಗಳ ಸಮಿತಿಯೊಂದನ್ನು ನೇಮಿಸಲಾಗಿದೆ ಎಂದು ರಾಜ್ಯಪಾಲ ಶ್ರೀ ಧರ್ಮವೀರ ಹೇಳಿದರು.

ವಿದ್ಯಾಕ್ಷೇತ್ರ, ಭೂಸುಧಾರಣೆಯಂಥ ವಿಷಯಗಳಲ್ಲಿ ಕೆಲವು ಬದಲಾವಣೆಗಳನ್ನು ಜನರು ನಿಮ್ಮಿಂದ ನಿರೀಕ್ಷಿಸಿದ್ದರು ಎಂದು ವರದಿಗಾರರೊಬ್ಬರು ಹೇಳಿದಾಗ ಅವರು ಹೀಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT