ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಬುಧವಾರ 06-10-1996

Last Updated 5 ಅಕ್ಟೋಬರ್ 2021, 15:19 IST
ಅಕ್ಷರ ಗಾತ್ರ

ಬಳಸದ ಮತಚೀಟಿಗಳನ್ನು ಇಂದು ಹಾಜರುಪಡಿಸಲು ರಾಜ್ಯ ಹೈಕೋರ್ಟ್‌ ಸೂಚನೆ

ಬೆಂಗಳೂರು, ಅ. 5– ಮೈಸೂರು ನಗರ ಕ್ಷೇತ್ರದಿಂದ ಲೋಕಸಭೆಗೆ ಜರುಗಿದ ಚುನಾವಣೆಯಲ್ಲಿ ಉಪಯೋಗಿಸದಿದ್ದ ಮತ ಚೀಟಿಗಳನ್ನು ಬುಧವಾರ ಬೆಳಿಗ್ಗೆ 11 ಗಂಟೆಯೊಳಗೆ ನ್ಯಾಯಾಲಯದಲ್ಲಿ ಹಾಜರು ಪಡಿಸಬೇಕೆಂದು ಮೈಸೂರು ಹೈಕೋರ್ಟಿನ ನ್ಯಾಯಮೂರ್ತಿ ಇ.ಎಸ್‌. ವೆಂಕಟರಾಮಯ್ಯ ಅವರು ಇಂದು ಆದೇಶ ನೀಡಿದರು.

ಧಾರವಾಡ ಉತ್ತರ, ಮೈಸೂರು ನಗರ, ಚಾಮರಾಜನಗರ, ಕೊಪ್ಪಳ ಮತ್ತು ಬಾಗಲಕೋಟೆ ಕ್ಷೇತ್ರಗಳಿಂದ ಈಚೆಗೆ ಲೋಕಸಭೆಗೆ ಜರುಗಿದ ಚುನಾವಣೆಗಳನ್ನು ಪ್ರಶ್ನಿಸಿ ಸಲ್ಲಿಸಿದ ರಿಟ್‌ ಅರ್ಜಿಗಳ ವಿಚಾರಣೆ ಹೈಕೋರ್ಟಿನಲ್ಲಿ ನಡೆಯಿತು.

ಪಂಜಾಬ್‌ ಕಾಂಗ್ರೆಸ್‌ ಬಿಕ್ಕಟ್ಟು ಅಂತ್ಯ

ನವದೆಹಲಿ, ಅ. 5– ಪಂಜಾಬ್‌ ಆಡಳಿತ ಕಾಂಗ್ರೆಸ್ಸಿನ ಎರಡು ಗುಂಪುಗಳು ಭಿನ್ನಾಭಿಪ್ರಾಯ ಮರೆತು ಬರುವ
ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷದ ಯಶಸ್ಸಿಗಾಗಿ ಶ್ರಮಿಸಲು ಇಂದು ಸಮ್ಮಿತಿಸಿದವು.

ಪಂಜಾಬ್‌ ಆಡಳಿತ ಕಾಂಗ್ರೆಸ್ಸಿನ ಹಿರಿಯ ನಾಯಕರು ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಜೊತೆ ದೀರ್ಘ ಮಾತುಕತೆ ನಡೆಸಿದ ಬಳಿಕ ಈ ಒಮ್ಮತಕ್ಕೆ ಬರಲಾಯಿತು. ಪಂಜಾಬಿನ ನಾಯಕರು ಉಮಾಶಂಕರ ದೀಕ್ಷಿತ್, ಡಾ. ಶಂಕರದಯಾಳ್‌ ಶರ್ಮಾ ಮತ್ತು ಚಂದ್ರಜಿತ್‌ಯಾದವ್‌ ಅವರೊಡನೆಯೂ ಮಾತುಕತೆ ನಡೆಸಿದರು.

ಎರಡು ಗುಂಪಿನ ಕಾಂಗ್ರೆಸ್ಸಿಗರೂ ತಮ್ಮ ಭಿನ್ನಾಭಿಪ್ರಾಯದ ಕಾರಣಗಳನ್ನು ಮಾತುಕತೆ ಕಾಲದಲ್ಲಿ ದೆಹಲಿ ವರಿಷ್ಠರಿಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT