ಎಸ್.ಎಂ. ಕೃಷ್ಣ, ಲಕ್ಕಪ್ಪ, ಹುಚ್ಚೇಗೌಡ ಆಡಳಿತ ಕಾಂಗ್ರೆಸ್ಗೆ
ಬೆಂಗಳೂರು, ಜ. 1– ಏಕ ಧ್ವಜದಡಿಯಲ್ಲಿ ಪ್ರಜಾಸತ್ತಾತ್ಮಕ ಸಮಾಜವಾದದ ಸಂಘಟನೆಗಾಗಿ ವಿಸರ್ಜಿತ ಸಂಸತ್ತಿನ ರಾಜ್ಯ ಪಿ.ಎಸ್.ಪಿ. ಸದಸ್ಯರಾದ ಸರ್ವಶ್ರೀ ಎಸ್.ಎಂ.ಕೃಷ್ಣ, ಕೆ.ಲಕ್ಕಪ್ಪ ಹಾಗೂ ಎಂ.ಹುಚ್ಚೇಗೌಡ, ವಿಧಾನಸಭೆಯಪಿ.ಎಸ್.ಪಿ. ಸದಸ್ಯರಾದ ಕೆ.ಎಚ್.ರಂಗನಾಥ್, ಸಿ.ಕೆ.ರಾಜಯ್ಯಶೆಟ್ಟಿ, ಪಿ.ಎಲ್.ಶಿವಪ್ಪ ಹಾಗೂ ಸಿ.ಎಂ.ಎಸ್. ಶಾಸ್ತ್ರಿ ಪಿ.ಎಸ್.ಪಿ.ಗೆ ರಾಜೀನಾಮೆಯಿತ್ತು ಆಡಳಿತ ಕಾಂಗ್ರೆಸ್ಸಿಗೆ ಸೇರಲಿದ್ದಾರೆ.