ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಶನಿವಾರ, 2 –1–1971

Last Updated 1 ಜನವರಿ 2021, 19:30 IST
ಅಕ್ಷರ ಗಾತ್ರ

ಎಸ್.ಎಂ. ಕೃಷ್ಣ, ಲಕ್ಕಪ್ಪ, ಹುಚ್ಚೇಗೌಡ ಆಡಳಿತ ಕಾಂಗ್ರೆಸ್‌ಗೆ
ಬೆಂಗಳೂರು, ಜ. 1–
ಏಕ ಧ್ವಜದಡಿಯಲ್ಲಿ ಪ್ರಜಾಸತ್ತಾತ್ಮಕ ಸಮಾಜವಾದದ ಸಂಘಟನೆಗಾಗಿ ವಿಸರ್ಜಿತ ಸಂಸತ್ತಿನ ರಾಜ್ಯ ಪಿ.ಎಸ್.ಪಿ. ಸದಸ್ಯರಾದ ಸರ್ವಶ್ರೀ ಎಸ್‌.ಎಂ.ಕೃಷ್ಣ, ಕೆ.ಲಕ್ಕಪ್ಪ ಹಾಗೂ ಎಂ.ಹುಚ್ಚೇಗೌಡ, ವಿಧಾನಸಭೆಯಪಿ.ಎಸ್‌.ಪಿ. ಸದಸ್ಯರಾದ ಕೆ.ಎಚ್.ರಂಗನಾಥ್, ಸಿ.ಕೆ.ರಾಜಯ್ಯಶೆಟ್ಟಿ, ಪಿ.ಎಲ್.ಶಿವಪ್ಪ ಹಾಗೂ ಸಿ.ಎಂ.ಎಸ್. ಶಾಸ್ತ್ರಿ ಪಿ.ಎಸ್‌.ಪಿ.ಗೆ ರಾಜೀನಾಮೆಯಿತ್ತು ಆಡಳಿತ ಕಾಂಗ್ರೆಸ್ಸಿಗೆ ಸೇರಲಿದ್ದಾರೆ.

ಕಾವೇರಿ ಜಲ ವಿವಾದ: ತ್ವರಿತ ಕ್ರಮಕ್ಕೆ ಕರುಣಾನಿಧಿ ಒತ್ತಾಯ
ಮದರಾಸ್, ಜ. 1–
ಕಾವೇರಿ ವಿವಾದದ ವಿಷಯದಲ್ಲಿ ಕೇಂದ್ರ ‘ಜಡ’ ಸ್ವಭಾವ ತಾಳಿರುವುದನ್ನು ಪ್ರಧಾನಿ ಇಂದಿರಾ ಗಾಂಧಿ ಅವರ ಗಮನಕ್ಕೆ ತಾವು ತಂದುದಾಗಿ ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ.ಕರುಣಾನಿಧಿ ಅವರು ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಈ ಜಲ ವಿವಾದವನ್ನು ಆದಷ್ಟು ಶೀಘ್ರವೇ ಪಂಚಾಯಿತಿಗೆ ಒಪ್ಪಿಸುವುದಕ್ಕೆ ತಮಿಳುನಾಡು ಸರ್ಕಾರ ಒತ್ತಾಯಪಡಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT