ಸಿಲ್ಹೆಟ್ ವಿಮುಕ್ತ ಢಾಕಾ, ಏ. 6– ಎರಡು ದಿನಗಳ ಉಗ್ರ ಕಾಳಗದ ನಂತರ ಬಾಂಗ್ಲಾದೇಶದ ‘ಮುಕ್ತಿ ಫೌಜ್’ ಇಂದು ಸಿಲ್ಹೆಟ್ ನಗರವನ್ನು ಸ್ವಾಧೀನಪಡಿಸಿಕೊಂಡು ಪಾಕಿಸ್ತಾನಿ ಪಡೆಗಳನ್ನು ಕೆಲವು ಕಿಲೊಮೀಟರುಗಳ ದೂರದ ಖದೀಂ ನಗರದಲ್ಲಿರುವ ಶಿಬಿರಗಳಿಗೆ ಅಟ್ಟಿತೆಂದು ಗಡಿಯಾಚೆಯಿಂದ ವರದಿ ಬಂದಿದೆ.
ಸೈನ್ಯವು ಶಿಬಿರಗಳಿಗೆ ಹಿಮ್ಮೆಟ್ಟಿದ ನಂತರ ಪಾಕಿಸ್ತಾನಿ ವಿಮಾನಗಳು ನಗರದ ಮೇಲೆ ಹಾಗೂ ವಿಮೋಚನಾ ಪಡೆ ವಶಪಡಿಸಿಕೊಂಡ ಪಕ್ಕದ ಸಲೂಶಿಕಾರ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ನಡೆಸಿದವೆಂದು ವರದಿಯಾಗಿದೆ.
ಗುಜರಾತಿಗೆ ಮತ್ತೆ ಸಂಸ್ಥಾ ಕಾಂಗ್ರೆಸ್ ಸರ್ಕಾರ– ಇಂದು ಅಧಿಕಾರಕ್ಕೆ ಅಹಮದಾಬಾದ್, ಏ. 6– ಗುಜರಾತ್ನಲ್ಲಿ ಹೊಸ ಸರ್ಕಾರ ರಚಿಸಲು ರಾಜ್ಯಪಾಲ ಶ್ರೀಮನ್ ನಾರಾಯಣ್ ಅವರು ಇಂದು ಉಸ್ತುವಾರಿ ಸರ್ಕಾರದ ಮುಖ್ಯಮಂತ್ರಿ ಹಿತೇಂದ್ರ ದೇಸಾಯಿ ಅವರನ್ನು ಆಹ್ವಾನಿಸಿದರು.
ಹೊಸ ಸಂಪುಟವು ಬುಧವಾರ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸುತ್ತದೆ.
‘ಎರಡೂ ಕಾಂಗ್ರೆಸ್ ಪಕ್ಷಗಳ ಪುನರೇಕೀಕರಣ’ದ ಹೆಸರಿನಲ್ಲಿ ತನ್ನ ಹಿಂದಿನ ಅನೇಕ ಶಾಸಕರನ್ನು ಮತ್ತೆ ತನ್ನ ಮಡಿಲಿಗೆ ತಂದುಕೊಳ್ಳುವುದರಲ್ಲಿ ಸಂಸ್ಥಾ ಕಾಂಗ್ರೆಸ್ ಇಂದು ಯಶಸ್ವಿಯಾಯಿತು.