ಆಡಳಿತ ಸುಧಾರಣೆಗೆ ರಾಜ್ಯಪಾಲರ ಸೂಚನೆ
ಬೆಂಗಳೂರು, ಜೂನ್ 7– ಬೆಂಗಳೂರು ವಿಶ್ವವಿದ್ಯಾಲಯದ ವ್ಯವಹಾರಗಳ ಬಗೆಗೆ ಸಾಮ್ಯುಯಲ್ ಮಥಾಯ್ ವರದಿಯನ್ನು ಸರ್ಕಾರವಿನ್ನು ಪರಿಶೀಲಿಸಬೇಕಾಗಿದ್ದರೂ ಕುಲಪತಿ ಶ್ರೀ ಮೋಹಲಾಲ್ ಸುಖಾಡಿಯಾ ಅವರ ಸೂಚನೆ ಪ್ರಕಾರ ವಿಶ್ವವಿದ್ಯಾಲಯದ ಆಡಳಿತದ ಸಂಬಂಧದಲ್ಲಿ ಅದರ ಕೆಲವು ನಿರ್ದಿಷ್ಟ ಶಿಫಾರಸುಗಳನ್ನು ಕಾರ್ಯಗತಗೊಳಿಸಲು ವಿಶ್ವವಿದ್ಯಾಲಯದ ಅಧಿಕಾರಿಗಳು ನಿರ್ಧರಿಸಿದ್ದಾರೆ. ತತ್ಕ್ಷಣ ಕ್ರಮ ಕೈಗೊಳ್ಳಬೇಕಾದ ನಿರ್ದಿಷ್ಟ ವಿಷಯಗಳನ್ನು, ವಿಶೇಷತಾ ಸಿಬ್ಬಂದಿ ವರ್ಗದ ಕೆಲವರ ವಿರುದ್ಧ ಶಿಸ್ತುಕ್ರಮ ಕುರಿತು, ಸುಖಾಡಿಯಾ ಅವರು ಪಟ್ಟಿ ಮಾಡಿ ವಿಶ್ವವಿದ್ಯಾಲಯಕ್ಕೆ ಬರೆದು ತಿಳಿಸಿದ್ದಾರೆಂದು ಗೊತ್ತಾಗಿದೆ.