ಗೋಪಾಲಗೌಡರಿಗೆ ಆತ್ಮೀಯರ ಅಂತಿಮ ಬೀಳ್ಕೊಡುಗೆ
ಬೆಂಗಳೂರು, ಜೂನ್ 10– ಬರಲು ಸಾಧ್ಯವಾದವರೆಲ್ಲ ಬಂದಿದ್ದರು. ಜೀಪಿನ ಹಿಂಭಾಗದ ವೇದಿಕೆಯ ಮೇಲೆ ಮಲಗಿದ್ದ ಶ್ರೀ ಶಾಂತವೇರಿ ಗೋಪಾಲಗೌಡ ಅವರನ್ನು ಹಿಂಬಾಲಿಸುತ್ತ ಬಿಸಿಲಿನಲ್ಲಿ ನಡೆದರು.
ಮಧ್ಯಾಹ್ನ 1.30ರ ಸಮಯದಲ್ಲಿ ಶ್ರೀ ಗೌಡ ಅವರ ಪಾರ್ಥಿವ ಶರೀರವನ್ನು ವಿದ್ಯುತ್ ಚಿತೆಯ ಗೂಡಿನಲ್ಲಿ ಇಡಲಾಯಿತು. ಇದಕ್ಕೆ ಮುನ್ನ ನೆರೆದಿದ್ದ ಗೆಳೆಯರು ಗದ್ಗದಿತ ಕಂಠದಲ್ಲಿ ‘ಸಮಾಜವಾದಿ ಗಾಂಧಿ ಗೋಪಾಲಗೌಡರು, ರಾಯುವಾಗಲಿ’ ಎಂದು ಜಯಕಾರ ಮಾಡಿದ್ದರು.