ನವದೆಹಲಿ, ನ. 17– ರಾಷ್ಟ್ರೀಕರಣಗೊಳಿಸಲ್ಪಟ್ಟಿರುವ ಹದಿನಾಲ್ಕು ಬ್ಯಾಂಕುಗಳಿಗೆ ಈಗಿನ ತಾತ್ಕಾಲಿಕ ಡೈರೆಕ್ಟರುಗಳ ಮಂಡಳಿಗಳ ಬದಲು ಠೇವಣಿದಾರರು, ಬ್ಯಾಂಕ್ ನೌಕರರು, ರೈತರು, ಕರಕುಶಲ ಕಾರ್ಮಿಕರು ಮುಂತಾದವರಿಗೆ ಪ್ರಾತಿನಿಧ್ಯವುಳ್ಳ ವಿಶಾಲ ತಳಹದಿಯ ಆಡಳಿತ ಮಂಡಳಿಗಳನ್ನು ರಚಿಸಲಾಗುವುದು ಎಂದು ಹಣಕಾಸು ಸಚಿವ ವೈ.ಬಿ. ಚವಾಣ್ ಇಂದು ಸಂಸತ್ನಲ್ಲಿ ಪ್ರಕಟಿಸಿದರು.