ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಂದಕ್ಕೆ ಹಾಕುವುದಿಲ್ಲ: ಇಂದಿರಾ
ಬಿಹಾರ್ ಷರೀಫ್, ಫೆ. 21– ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಅಲ್ಲಿ ಲೋಕಸಭಾ ಚುನಾವಣೆಯನ್ನು ಮುಂದಕ್ಕೆ ಹಾಕುವುದಿಲ್ಲ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಸ್ಪಷ್ಟಪಡಿಸಿದರು.
ಮುಯ್ಯಿಗೆ ಮುಯ್ಯಿ
ಮದ್ರಾಸ್, ಫೆ. 21– ಮದ್ರಾಸಿನಲ್ಲಿ ಮಾಜಿ ಅರಸರ ರಾಜಧನ ಕುರಿತು ಡಿ.ಎಂ.ಕೆ ಮತ್ತು ಸಂಸ್ಥಾ ಕಾಂಗ್ರೆಸ್ಸಿನ ನಡುವೆ ಭಿತ್ತಿಪತ್ರ ಸಮರ ನಡೆದಿದೆ.
ಸಂಸ್ಥಾ ಕಾಂಗ್ರೆಸ್ ನಾಯಕ ಕಾಮರಾಜ್ ಅವರು ಮಹಾರಾಜ ಕೂತಿರುವ ಪಲ್ಲಕ್ಕಿಯನ್ನು ಹೊತ್ತುಕೊಂಡು ಹೋಗುತ್ತಿರುವ ಭಿತ್ತಿಪತ್ರವೊಂದನ್ನು ಡಿ.ಎಂ.ಕೆ ಮೊದಲು ಬಿಡುಗಡೆ ಮಾಡಿತ್ತು.
ಡಿ.ಎಂ.ಕೆ ಸಂಸತ್ ಸದಸ್ಯನೊಬ್ಬ ರಾಜನ ಮುಂದೆ ಕೈಕಟ್ಟಿ ನಿಂತಿರುವುದನ್ನು ಸಂಸ್ಥಾ ಕಾಂಗ್ರೆಸ್ಸಿನ ಭಿತ್ತಿಪತ್ರಗಳಲ್ಲಿ ಚಿತ್ರಿಸಲಾಗಿದೆ. ಈ ಚಿತ್ರದ ಕೆಳಗೆ ‘ಓ ರಾಜ, ನಾನು ನಿನ್ನ ಆಜ್ಞಾಪಾಲಕ’ ಎಂದು ಬರೆಯಲಾಗಿದೆ.