<p>25 ವರ್ಷಗಳ ಹಿಂದೆ; ಬುಧವಾರ, 18–4–2001</p><p>ಬೆಂಗಳೂರು, ಏ. 17– ಚಲನಚಿತ್ರ ಮಾಧ್ಯಮದಲ್ಲಿನ ಕೊಡುಗೆಗಾಗಿ ಪ್ರತಿವರ್ಷ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಕೊಡುತ್ತಿದ್ದ ಸರ್ಕಾರ ಇದೀಗ ಕಿರುತೆರೆಯಲ್ಲಿ ಪ್ರದರ್ಶಗೊಳ್ಳುವ ಅತ್ಯುತ್ತಮ ಧಾರಾವಾಹಿ ಮತ್ತು ಸಾಕ್ಷ್ಯಚಿತ್ರಗಳಿಗೂ ಪ್ರಶಸ್ತಿ ಕೊಡಲು ನಿರ್ಧರಿಸಿದ್ದು, 1999–2000ನೇ ಸಾಲಿನ ಅತ್ಯುತ್ತಮ ಧಾರಾವಾಹಿ ಪ್ರಶಸ್ತಿಯು ಟಿ.ಎನ್. ಸೀತಾರಾಂ ನಿರ್ದೇಶನದ ‘ಮಾಯಾಮೃಗ’ಕ್ಕೆ ಸಂದಿದೆ.</p>.<p>ಭೂಮಿಕಾ ಸಂಸ್ಥೆ ನಿರ್ಮಿಸಿದ ಈ ಧಾರಾವಾಹಿಗೆ 25,000 ರೂಪಾಯಿಗಳ ಬಹುಮಾನ ದೊರೆಯಲಿದ್ದು, ಅದೇ ಸಾಲಿನಲ್ಲಿ ದೂರದರ್ಶನ ಕೇಂದ್ರ ನಿರ್ಮಿಸಿ ಉಳ್ಳಾಲಿ ಸುಲೋಚನಾ ಮತ್ತು ರಘು ಅವರ ನಿರ್ದೇಶನದಲ್ಲಿ ಪ್ರಸಾರಗೊಂಡ ‘ದೀಪಾವಳಿ ದೀಪೋತ್ಸವ’ ಎಂಬ ಸಾಕ್ಷ್ಯಚಿತ್ರಕ್ಕೆ 15,000 ರೂಪಾಯಿಗಳ ಬಹುಮಾನ ಪ್ರಕಟಿಸಲಾಗಿದೆ.</p>.<p><strong>ಬೀದರ್ನಲ್ಲಿ ಲಾಕಪ್ ಸಾವು: ಎಸ್ಐ ಸೇರಿ ಮೂವರ ಸಸ್ಪೆಂಡ್</strong></p>.<p>ಬೀದರ್, ಏ. 17– ಪೊಲೀಸ್ ಕಸ್ಟಡಿಯಲ್ಲಿದ್ದ ಆಟೊ ಚಾಲಕ ಮಾರುತಿ ಕೋಳಿ (25) ಇಂದು ಬೆಳಗಿನ ಜಾವ ಇಲ್ಲಿಯ ಗಾಂಧಿ ಗಂಜ್ ಠಾಣೆಯ ಲಾಕಪ್ನಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಠಾಣೆಯ ಎಸ್ಐ ಸೇರಿದಂತೆ ಮೂವರನ್ನು ಸಸ್ಪೆಂಡ್ ಮಾಡಲಾಗಿದೆಯಲ್ಲದೆ ಅಕ್ರಮವಾಗಿ ಬಂಧನದಲ್ಲಿಟ್ಟ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.</p>.<p>ಇಂದು ಸಂಜೆ ಜಿಲ್ಲಾ ಆಸ್ಪತ್ರೆಯಲ್ಲಿ ಯುವಕನ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>25 ವರ್ಷಗಳ ಹಿಂದೆ; ಬುಧವಾರ, 18–4–2001</p><p>ಬೆಂಗಳೂರು, ಏ. 17– ಚಲನಚಿತ್ರ ಮಾಧ್ಯಮದಲ್ಲಿನ ಕೊಡುಗೆಗಾಗಿ ಪ್ರತಿವರ್ಷ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಕೊಡುತ್ತಿದ್ದ ಸರ್ಕಾರ ಇದೀಗ ಕಿರುತೆರೆಯಲ್ಲಿ ಪ್ರದರ್ಶಗೊಳ್ಳುವ ಅತ್ಯುತ್ತಮ ಧಾರಾವಾಹಿ ಮತ್ತು ಸಾಕ್ಷ್ಯಚಿತ್ರಗಳಿಗೂ ಪ್ರಶಸ್ತಿ ಕೊಡಲು ನಿರ್ಧರಿಸಿದ್ದು, 1999–2000ನೇ ಸಾಲಿನ ಅತ್ಯುತ್ತಮ ಧಾರಾವಾಹಿ ಪ್ರಶಸ್ತಿಯು ಟಿ.ಎನ್. ಸೀತಾರಾಂ ನಿರ್ದೇಶನದ ‘ಮಾಯಾಮೃಗ’ಕ್ಕೆ ಸಂದಿದೆ.</p>.<p>ಭೂಮಿಕಾ ಸಂಸ್ಥೆ ನಿರ್ಮಿಸಿದ ಈ ಧಾರಾವಾಹಿಗೆ 25,000 ರೂಪಾಯಿಗಳ ಬಹುಮಾನ ದೊರೆಯಲಿದ್ದು, ಅದೇ ಸಾಲಿನಲ್ಲಿ ದೂರದರ್ಶನ ಕೇಂದ್ರ ನಿರ್ಮಿಸಿ ಉಳ್ಳಾಲಿ ಸುಲೋಚನಾ ಮತ್ತು ರಘು ಅವರ ನಿರ್ದೇಶನದಲ್ಲಿ ಪ್ರಸಾರಗೊಂಡ ‘ದೀಪಾವಳಿ ದೀಪೋತ್ಸವ’ ಎಂಬ ಸಾಕ್ಷ್ಯಚಿತ್ರಕ್ಕೆ 15,000 ರೂಪಾಯಿಗಳ ಬಹುಮಾನ ಪ್ರಕಟಿಸಲಾಗಿದೆ.</p>.<p><strong>ಬೀದರ್ನಲ್ಲಿ ಲಾಕಪ್ ಸಾವು: ಎಸ್ಐ ಸೇರಿ ಮೂವರ ಸಸ್ಪೆಂಡ್</strong></p>.<p>ಬೀದರ್, ಏ. 17– ಪೊಲೀಸ್ ಕಸ್ಟಡಿಯಲ್ಲಿದ್ದ ಆಟೊ ಚಾಲಕ ಮಾರುತಿ ಕೋಳಿ (25) ಇಂದು ಬೆಳಗಿನ ಜಾವ ಇಲ್ಲಿಯ ಗಾಂಧಿ ಗಂಜ್ ಠಾಣೆಯ ಲಾಕಪ್ನಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಠಾಣೆಯ ಎಸ್ಐ ಸೇರಿದಂತೆ ಮೂವರನ್ನು ಸಸ್ಪೆಂಡ್ ಮಾಡಲಾಗಿದೆಯಲ್ಲದೆ ಅಕ್ರಮವಾಗಿ ಬಂಧನದಲ್ಲಿಟ್ಟ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.</p>.<p>ಇಂದು ಸಂಜೆ ಜಿಲ್ಲಾ ಆಸ್ಪತ್ರೆಯಲ್ಲಿ ಯುವಕನ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>