<p>25 ವರ್ಷಗಳ ಹಿಂದೆ; ಮಂಗಳವಾರ, 17–4–2001</p><p>ಬೆಂಗಳೂರು, ಏ. 16– ‘ಕಾಂಗ್ರೆಸ್ ಪಕ್ಷದ ಒಳಗೇ ಜೇಬುಗಳ್ಳರಿದ್ದಾರೆ. ಕಾರ್ಯಕರ್ತರು ಎಚ್ಚರಿಕೆಯಿಂದ ಇರಿ’</p>.<p>–ಈ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ. ಪಕ್ಷದ ಹಿರಿಯ ಮುಖಂಡ ಹಾಗೂ ಕೆಪಿಸಿಸಿ ಅಧ್ಯಕ್ಷ ಪದವಿಯಿಂದ ಇತ್ತೀಚೆಗಷ್ಟೇ ನಿರ್ಗಮಿಸಿದ ವಿ.ಎಸ್. ಕೌಜಲಗಿ ಅವರು.</p>.<p>ಕೆಪಿಸಿಸಿ ಹೊಸ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರಿಗೆ ಇಂದು ಅಧಿಕಾರ ಹಸ್ತಾಂತರಿಸಿದ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರಿಗೆ ಈ ಕರೆ ನೀಡಿದರು.</p>.<p>ಕಾಂಗ್ರೆಸ್ನಿಂದ ದೆಹಲಿಯಲ್ಲಿ ಏರ್ಪಡಿಸಿದ್ದ ರೈತರ ರ್ಯಾಲಿಯಲ್ಲಿ ಭಾಗವಹಿಸಿದ್ದಾಗ ತಮ್ಮ ಜೇಬಿಗೆ ಕತ್ತರಿ ಬಿದ್ದ ಸಂದರ್ಭವನ್ನು ನೆನಪಿಸಿಕೊಂಡ ಅವರು, ಪಕ್ಷದ ಒಳಗೇ ಜೇಬುಗಳ್ಳರಿದ್ದಾರೆ. ಹೊರಗಿಲ್ಲ ಎಂದರು.</p>.<p><strong>ಸಂಸತ್ತಿನ ಸುಗಮ ಕಲಾಪಕ್ಕೆ ಸರ್ವಪಕ್ಷಗಳ ಒಪ್ಪಿಗೆ</strong></p>.<p>ನವದೆಹಲಿ, ಏ. 16 (ಯುಎನ್ಐ)– ಸಂಸತ್ತಿನ ಕಲಾಪಗಳಿಗೆ ನಾಳೆಯಿಂದ ಅಡೆತಡೆ ಉಂಟು ಮಾಡದಿರಲು ಎಲ್ಲ ಪಕ್ಷಗಳು ಇಂದು ಒಪ್ಪಿಕೊಂಡಿವೆ.</p>.<p>ಮಾರ್ಚ್ ತಿಂಗಳಲ್ಲಿ 10 ದಿನಗಳವರೆಗೆ ಸಂಸತ್ತಿನ ಎರಡೂ ಕಲಾಪಗಳು ಸ್ಥಗಿತಗೊಳ್ಳಲು ಕಾರಣವಾಗಿದ್ದ ತೆಹಲ್ಕಾ ವಿವಾದದ ಬಿಕ್ಕಟ್ಟನ್ನು ನಿವಾರಿಸಲು ಲೋಕಸಭಾಧ್ಯಕ್ಷ ಜೆ.ಎಂ.ಸಿ. ಬಾಲಯೋಗಿ ಅವರು, ಇಂದು ಇಲ್ಲಿ ಕರೆದಿದ್ದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>25 ವರ್ಷಗಳ ಹಿಂದೆ; ಮಂಗಳವಾರ, 17–4–2001</p><p>ಬೆಂಗಳೂರು, ಏ. 16– ‘ಕಾಂಗ್ರೆಸ್ ಪಕ್ಷದ ಒಳಗೇ ಜೇಬುಗಳ್ಳರಿದ್ದಾರೆ. ಕಾರ್ಯಕರ್ತರು ಎಚ್ಚರಿಕೆಯಿಂದ ಇರಿ’</p>.<p>–ಈ ಮಾತನ್ನು ಹೇಳಿದವರು ಬೇರೆ ಯಾರೂ ಅಲ್ಲ. ಪಕ್ಷದ ಹಿರಿಯ ಮುಖಂಡ ಹಾಗೂ ಕೆಪಿಸಿಸಿ ಅಧ್ಯಕ್ಷ ಪದವಿಯಿಂದ ಇತ್ತೀಚೆಗಷ್ಟೇ ನಿರ್ಗಮಿಸಿದ ವಿ.ಎಸ್. ಕೌಜಲಗಿ ಅವರು.</p>.<p>ಕೆಪಿಸಿಸಿ ಹೊಸ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರಿಗೆ ಇಂದು ಅಧಿಕಾರ ಹಸ್ತಾಂತರಿಸಿದ ಸಮಾರಂಭದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರಿಗೆ ಈ ಕರೆ ನೀಡಿದರು.</p>.<p>ಕಾಂಗ್ರೆಸ್ನಿಂದ ದೆಹಲಿಯಲ್ಲಿ ಏರ್ಪಡಿಸಿದ್ದ ರೈತರ ರ್ಯಾಲಿಯಲ್ಲಿ ಭಾಗವಹಿಸಿದ್ದಾಗ ತಮ್ಮ ಜೇಬಿಗೆ ಕತ್ತರಿ ಬಿದ್ದ ಸಂದರ್ಭವನ್ನು ನೆನಪಿಸಿಕೊಂಡ ಅವರು, ಪಕ್ಷದ ಒಳಗೇ ಜೇಬುಗಳ್ಳರಿದ್ದಾರೆ. ಹೊರಗಿಲ್ಲ ಎಂದರು.</p>.<p><strong>ಸಂಸತ್ತಿನ ಸುಗಮ ಕಲಾಪಕ್ಕೆ ಸರ್ವಪಕ್ಷಗಳ ಒಪ್ಪಿಗೆ</strong></p>.<p>ನವದೆಹಲಿ, ಏ. 16 (ಯುಎನ್ಐ)– ಸಂಸತ್ತಿನ ಕಲಾಪಗಳಿಗೆ ನಾಳೆಯಿಂದ ಅಡೆತಡೆ ಉಂಟು ಮಾಡದಿರಲು ಎಲ್ಲ ಪಕ್ಷಗಳು ಇಂದು ಒಪ್ಪಿಕೊಂಡಿವೆ.</p>.<p>ಮಾರ್ಚ್ ತಿಂಗಳಲ್ಲಿ 10 ದಿನಗಳವರೆಗೆ ಸಂಸತ್ತಿನ ಎರಡೂ ಕಲಾಪಗಳು ಸ್ಥಗಿತಗೊಳ್ಳಲು ಕಾರಣವಾಗಿದ್ದ ತೆಹಲ್ಕಾ ವಿವಾದದ ಬಿಕ್ಕಟ್ಟನ್ನು ನಿವಾರಿಸಲು ಲೋಕಸಭಾಧ್ಯಕ್ಷ ಜೆ.ಎಂ.ಸಿ. ಬಾಲಯೋಗಿ ಅವರು, ಇಂದು ಇಲ್ಲಿ ಕರೆದಿದ್ದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>