‘...ದಂಡ ಕಟ್ಟಲು ಸಿದ್ಧ. ಆದರೆ, ದೇವರನ್ನು ಮುಟ್ಟಲು ದಲಿತರಿಗೆ ಅವಕಾಶ ಕೊಡಬೇಕು’ ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಧರ್ಮಸೇನ ಅವರು ಹೇಳಿರುವುದು ವರದಿಯಾಗಿದೆ (ಪ್ರ.ವಾ., ಸೆ. 25). ಉಳ್ಳೇರಹಳ್ಳಿಯಲ್ಲಿ ಪರಿಶಿಷ್ಟ ಸಮುದಾಯದ ಬಾಲಕ, ದೇವರ ಗುಜ್ಜುಕೋಲು ಮುಟ್ಟಿದ ಕಾರಣಕ್ಕೆ ಹಲ್ಲೆಗೆ ಒಳಗಾಗಿದ್ದರಿಂದ ಈ ಮಾತು ಬಂದಿದೆ. ‘ದಂಡ’ ಪದದ ಅರ್ಥ ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದು, ಜುಲ್ಮಾನೆ ಹಾಕುವುದು ಎಂದು. ‘ನಾವು ತಪ್ಪು ಮಾಡುತ್ತೇವೆ. ಆ ತಪ್ಪಿಗೆ ನೀವು ನಮಗೆ ಶಿಕ್ಷೆ ವಿಧಿಸಿ, ಜುಲ್ಮಾನೆ ಹಾಕಿ’ ಎಂದು ಹೇಳಿದಂತಾಯಿತು. ದಲಿತರು ಈ ರೀತಿಯ ಶರಣಾಗತಿ ಮನಃಸ್ಥಿತಿಯಿಂದ ಹೊರಬರಬೇಕಿದೆ.