<h2>ಸ್ಥಳೀಯ ಸಂಸ್ಥೆ ಚುನಾವಣೆ: ಏಪ್ರಿಲ್ 19ರ ಗಡುವು</h2>.<p><strong>ಬೆಂಗಳೂರು, ಮಾರ್ಚ್ 8–</strong> ರಾಜ್ಯದ ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಪ್ರಕ್ರಿಯೆಯನ್ನು ಏಪ್ರಿಲ್ 19ರ ಒಳಗೆ ಪೂರ್ಣಗೊಳಿಸುವಂತೆ ಹೈಕೋರ್ಟ್ ಇಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.</p>.<p>ವಾರ್ಡ್ಗಳಿಗೆ ಮೀಸಲಾತಿ ಕುರಿತಂತೆ ಮಾರ್ಚ್ 13ರ ಒಳಗೆ ಅಧಿಸೂಚನೆ ಹೊರಡಿಸಬೇಕು ಮತ್ತು ಈ ಸಂಬಂಧ ತೆಗೆದುಕೊಂಡ ಕ್ರಮದ ಬಗೆಗೆ ಮರುದಿನವೇ (ಮಾರ್ಚ್ 14) ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಜಿ.ಸಿ. ಭರೂಕ ಮತ್ತು ಶ್ರೀಧರರಾವ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿತು. </p>.<h2>ಪಾಂಡವಪುರ ಸಕ್ಕರೆ ಕಾರ್ಖಾನೆಗೆ ಬೆಂಕಿ: ರೂ. 5 ಕೋಟಿ ನಷ್ಟ</h2>.<p><strong>ಮಂಡ್ಯ, ಮಾರ್ಚ್ 8–</strong> ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ರಾತ್ರಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಸುಮಾರು ರೂ. 5 ಕೋಟಿ ನಷ್ಟ ಉಂಟಾಗಿದೆ.</p>.<p>ಕಾರ್ಖಾನೆಯ ಮೊಗಸಾಲೆಯಲ್ಲಿದ್ದ (ಡ್ರೈಯರ್ ಹಾಲ್) ಸಕ್ಕರೆ ಚೀಲಗಳಿಗೆ ರಾತ್ರಿ 8ರಿಂದ 8.30ರಲ್ಲಿ ಬೆಂಕಿ ಬಿದ್ದಿದೆ. ಇದರಿಂದ ರೂ. 4 ಕೋಟಿ 75 ಲಕ್ಷ ಮೌಲ್ಯದ 34,327 ಸಕ್ಕರೆ ಚೀಲಗಳು ಮತ್ತು ಮೂರ್ನಾಲ್ಕು ಕಡೆ ಗೋಡೆ ಕುಸಿದು ರೂ. 25 ಲಕ್ಷದಷ್ಟು ನಷ್ಟ ಸಂಭವಿಸಿದೆ.</p>.<p>ಇದಲ್ಲದೆ, ವಿದ್ಯುತ್ ಕೇಬಲ್ಗಳು ಹಾನಿಗೆ ಒಳಗಾಗಿವೆ. ಕಾರ್ಖಾನೆ ಯಂತ್ರೋಪಕರಣಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ ಮತ್ತು ಯಾರಿಗೂ ಏನೂ ತೊಂದರೆ ಆಗಿಲ್ಲ. ಶಾರ್ಟ್ ಸರ್ಕಿಟ್ನಿಂದ ಬೆಂಕಿ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<h2>ಸ್ಥಳೀಯ ಸಂಸ್ಥೆ ಚುನಾವಣೆ: ಏಪ್ರಿಲ್ 19ರ ಗಡುವು</h2>.<p><strong>ಬೆಂಗಳೂರು, ಮಾರ್ಚ್ 8–</strong> ರಾಜ್ಯದ ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಪ್ರಕ್ರಿಯೆಯನ್ನು ಏಪ್ರಿಲ್ 19ರ ಒಳಗೆ ಪೂರ್ಣಗೊಳಿಸುವಂತೆ ಹೈಕೋರ್ಟ್ ಇಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.</p>.<p>ವಾರ್ಡ್ಗಳಿಗೆ ಮೀಸಲಾತಿ ಕುರಿತಂತೆ ಮಾರ್ಚ್ 13ರ ಒಳಗೆ ಅಧಿಸೂಚನೆ ಹೊರಡಿಸಬೇಕು ಮತ್ತು ಈ ಸಂಬಂಧ ತೆಗೆದುಕೊಂಡ ಕ್ರಮದ ಬಗೆಗೆ ಮರುದಿನವೇ (ಮಾರ್ಚ್ 14) ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ಜಿ.ಸಿ. ಭರೂಕ ಮತ್ತು ಶ್ರೀಧರರಾವ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿತು. </p>.<h2>ಪಾಂಡವಪುರ ಸಕ್ಕರೆ ಕಾರ್ಖಾನೆಗೆ ಬೆಂಕಿ: ರೂ. 5 ಕೋಟಿ ನಷ್ಟ</h2>.<p><strong>ಮಂಡ್ಯ, ಮಾರ್ಚ್ 8–</strong> ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ರಾತ್ರಿ ಆಕಸ್ಮಿಕ ಬೆಂಕಿ ಅನಾಹುತ ಸಂಭವಿಸಿ ಸುಮಾರು ರೂ. 5 ಕೋಟಿ ನಷ್ಟ ಉಂಟಾಗಿದೆ.</p>.<p>ಕಾರ್ಖಾನೆಯ ಮೊಗಸಾಲೆಯಲ್ಲಿದ್ದ (ಡ್ರೈಯರ್ ಹಾಲ್) ಸಕ್ಕರೆ ಚೀಲಗಳಿಗೆ ರಾತ್ರಿ 8ರಿಂದ 8.30ರಲ್ಲಿ ಬೆಂಕಿ ಬಿದ್ದಿದೆ. ಇದರಿಂದ ರೂ. 4 ಕೋಟಿ 75 ಲಕ್ಷ ಮೌಲ್ಯದ 34,327 ಸಕ್ಕರೆ ಚೀಲಗಳು ಮತ್ತು ಮೂರ್ನಾಲ್ಕು ಕಡೆ ಗೋಡೆ ಕುಸಿದು ರೂ. 25 ಲಕ್ಷದಷ್ಟು ನಷ್ಟ ಸಂಭವಿಸಿದೆ.</p>.<p>ಇದಲ್ಲದೆ, ವಿದ್ಯುತ್ ಕೇಬಲ್ಗಳು ಹಾನಿಗೆ ಒಳಗಾಗಿವೆ. ಕಾರ್ಖಾನೆ ಯಂತ್ರೋಪಕರಣಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ ಮತ್ತು ಯಾರಿಗೂ ಏನೂ ತೊಂದರೆ ಆಗಿಲ್ಲ. ಶಾರ್ಟ್ ಸರ್ಕಿಟ್ನಿಂದ ಬೆಂಕಿ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>