ನವದೆಹಲಿ, ಸೆಪ್ಟೆಂಬರ್ 17 (ಯುಎನ್ಐ)– ಪಡಿತರ ಸಕ್ಕರೆ ಬೆಲೆಯನ್ನು ಕೆ.ಜಿಗೆ 90 ಪೈಸೆಯಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಇಂದು ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ಸಚಿವ ರಘುವಂಶ ಪ್ರಸಾದ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿಂದು ಪ್ರಕಟಿಸಿದರು.
ಸರ್ಕಾರದ ಈ ನಿರ್ಧಾರದಿಂದ ಪಡಿತರ ಸಕ್ಕರೆ ಬೆಲೆ ₹11.40ಕ್ಕೆ ಹೆಚ್ಚಲಿದೆ.