ನವದೆಹಲಿ, ಡಿ. 3– ಲೋಕಸಭೆಯನ್ನು ವಿಸರ್ಜಿಸುವಂತೆ ಕೇಂದ್ರ ಮಂತ್ರಿಮಂಡಲ ಇಂದು ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರಿಗೆ ಶಿಫಾರಸು ಮಾಡುವುದರೊಂದಿಗೆ ಕಳೆದ ಮೂರು ವಾರಗಳಿಂದ ತಲೆದೋರಿದ್ದ ರಾಜಕೀಯ ಬಿಕ್ಕಟ್ಟು ಅಂತ್ಯ ಗೊಂಡಂತಾಗಿದೆ.
ಇಂದು ಸಂಜೆ 6.15ಕ್ಕೆ ಸೌತ್ ಬ್ಲಾಕ್ನಲ್ಲಿ ನಡೆದ ಪೂರ್ಣ ಪ್ರಮಾಣದ ಮಂತ್ರಿ ಮಂಡಲ ಸಭೆಯು ಲೋಕಸಭೆ ವಿಸರ್ಜನೆಗೆ ಶಿಫಾರಸು ಮಾಡುವ ಒಮ್ಮತದ ತೀರ್ಮಾನ ಕೈಗೊಂಡಿತು.