ನವದೆಹಲಿ, ಡಿಸೆಂಬರ್ 4:ಹನ್ನೊಂದನೆಯ ಲೋಕಸಭೆಯನ್ನು ರಾಷ್ಟ್ರಪತಿ ಇಂದು ವಿಧ್ಯುಕ್ತವಾಗಿ ವಿಸರ್ಜಿಸಿ ರಾಜಕೀಯ ಅನಿಶ್ಚಿತತೆಗೆ ತೆರೆ ಎಳೆದರು. ಅವಧಿ ಮುಗಿಸಲು ಮೂರೂವರೆ ವರ್ಷ ಕಾಲಾವಕಾಶ ಇದ್ದ ಪ್ರಸಕ್ತ ಲೋಕಸಭೆ ಹಠಾತ್ ಅಂತ್ಯಗೊಂಡ ಕಾರಣ ದೇಶ ಮತ್ತೊಮ್ಮೆ ಮಧ್ಯಂತರ ಚುನಾವಣೆ ಎದುರಿಸಬೇಕಾಗಿದೆ. ಸರ್ಕಾರ ರಚನೆಗೆ ರಾಜಕೀಯ ಪಕ್ಷಗಳು ನಡೆಸಿದ ಎಲ್ಲ ಬಗೆಯ ಕಸರತ್ತುಗಳು ವಿಫಲಗೊಂಡ ನಂತರ ರಾಷ್ಟ್ರಪತಿ ಅನಿವಾರ್ಯವಾಗಿ ಕೈಗೊಂಡ ಈ ನಿರ್ಧಾರದಂತೆ, ಮಾರ್ಚ್ 15ರ ಒಳಗೆ ನೂತನ ಲೋಕಸಭೆಯನ್ನು ಅಸ್ತಿತ್ವಕ್ಕೆ ತರಲು ಚುನಾವಣಾ ಆಯೋಗ ಕ್ರಮ ಆರಂಭಿಸಿದೆ.