ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಮಾಜವಾದಿ ಪಕ್ಷದ ನಾಯಕ ಮಹಮ್ಮದ್ ಆಜಂ ಖಾನ್ ಅವರು, ‘ಈ ರಥಯಾತ್ರೆಯಿಂದ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹೆಚ್ಚುವ ಸಾಧ್ಯತೆಯಿದೆ. ಜೊತೆಗೆ ಇದರಿಂದ ದೇಶದ ಕೋಮು ಸಾಮರಸ್ಯಕ್ಕೆ ತೀವ್ರ ಧಕ್ಕೆಯಾಗಲಿದೆ. ರಥಯಾತ್ರೆ ನಡೆದದ್ದೇ ಆದಲ್ಲಿ 1992ರ ಡಿಸೆಂಬರ್ ಆರರ ಘಟನೆ ಮರುಕಳಿಸಲಿದೆ’ ಎಂದು ಭೀತಿ ವ್ಯಕ್ತಪಡಿಸಿದರು.