ಜಿಲ್ಲಾ ಕೇಂದ್ರಗಳಲ್ಲಿ ಪ್ರಧಾನಿಯವರು ಕೈಗೊಂಡ ಮೊದಲ ಪ್ರವಾಸ ಹಾಗೂ ‘ಜನಾದೇಶ’ ಪಡೆಯಲು ಹೆಗಡೆ ಅವರು ನಡೆಸಿದ ಕೊನೆಯ ಸುತ್ತಿನ ಪ್ರವಾಸಗಳು ಜನಹಿತಕ್ಕಿಂತ ಹೆಚ್ಚಾಗಿ ರಾಜಕೀಯ ಹಿತಸಾಧನೆಯ ಅಸ್ತ್ರವಾಗಿ ಬಳಕೆಯಾಗಿ
ರುವುದು ಜನವಲಯದಲ್ಲಿ ತೀರಾ ಚರ್ಚೆಗೆ ಗ್ರಾಸ ಒದಗಿಸಿದೆ. ಪರಸ್ಪರ ರಾಜಕೀಯ ಸಮರದ ದ್ಯೋತಕವಾಗಿ ಏರ್ಪಾಡಾಗಿದ್ದ ಇಬ್ಬರು ಮುಖಂಡರ ಬಹಿರಂಗ ಸಭೆಗಳೂ ಪರಸ್ಪರ ದೋಷಾರೋಪಣೆ, ನಿಂದನೆ, ಟೀಕೆಗಳ ವೇದಿಕೆಗಳಾಗಿ ಮಾರ್ಪಟ್ಟಿವೆ.