ನವದೆಹಲಿ, ಜ– 25 (ಪಿಟಿಐ, ಯುಎನ್ಐ)– ದೇಶದಲ್ಲಿ ಕೋಮುವಾದ, ಜಾತಿವಾದ, ಭ್ರಷ್ಟಾಚಾರ ಹಿಂಸೆ ಹಾಗೂ ರಾಜಕೀಯದಲ್ಲಿ ಅಪರಾಧೀಕರಣ ತಡೆಯಿಲ್ಲದೇ ಬೆಳೆಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರಪತಿ ಕೆ. ಆರ್. ನಾರಾಯಣನ್ ಅವರು ಈ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವಂತೆ ಜನತೆಗೆ ಕರೆ ನೀಡಿದ್ದಾರೆ.