ನವದೆಹಲಿ, ಜ. 25 (ಯುಎನ್ಐ, ಪಿಟಿಐ)– ‘ರಾಷ್ಟ್ರೀಯ ಭದ್ರತೆಗೆ ನೇರ ಬೆದರಿಕೆ ಒಡ್ಡಿರುವ ಪಟ್ಟಭದ್ರ ಕೆಡುಕುಗಳಾದ ಭ್ರಷ್ಟಾಚಾರ, ಮತಾಂಧತೆ, ಜಾತಿವಾದ ಮತ್ತು ಅಪರಾಧೀಕರಣಗಳನ್ನು ಕಿತ್ತೊಗೆಯಲು ಜನಶಕ್ತಿಯನ್ನು ಒಗ್ಗೂಡಿಸಿ’ ಎಂದು ರಾಷ್ಟ್ರಪತಿ ಡಾ. ಶಂಕರ ದಯಾಳ್ ಶರ್ಮಾ ಅವರು ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಗಣರಾಜ್ಯೋತ್ಸವ ಭಾಷಣದಲ್ಲಿ ಜನರಿಗೆ ಕರೆ ನೀಡಿದರು.