ಇದಕ್ಕೂ ಮುನ್ನ ಲಲ್ಲೂ ಪ್ರಸಾದ್ ಯಾದವ್ ಅವರು ಬೊಮ್ಮಾಯಿಯವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಬೇಕೆಂಬ ನಿಲುವು ತಾಳಿದ್ದರೆನ್ನಲಾಗಿದೆ. ಆದರೆ ಹವಾಲ ಹಗರಣದಲ್ಲಿ ಒಳಗೊಂಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ, ಪಕ್ಷದ ಪ್ರತಿಷ್ಠೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಬೊಮ್ಮಾಯಿಯವರು ರಾಜೀನಾಮೆ ನೀಡುವುದು ಸೂಕ್ತ ಎಂಬ ನಿಲುವಿಗೇ ಪಕ್ಷದ ಹೆಚ್ಚಿನ ನಾಯಕರು ಒಲವು ತೋರಿಸಿದರು ಎನ್ನಲಾಗಿದೆ.