ನವದೆಹಲಿ, ಡಿ. 28 (ಪಿಟಿಐ, ಯುಎನ್ಐ)– ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನ ಸ್ಥಾನಕ್ಕೆ ಚುನಾವಣೆಯೇ ನಡೆಯಬೇಕು ಎಂದು ನರಸಿಂಹ ರಾವ್ ಬಣದ ಹತ್ತು ಸಂಸತ್ ಸದಸ್ಯರು ಹಾಗೂ ಕಾರ್ಯಕಾರಿಣಿ ಸದಸ್ಯ ರಾಜೇಶ್ ಪೈಲಟ್ ಅವರು ಇಂದು ಪ್ರತ್ಯೇಕ ಹೇಳಿಕೆ ನೀಡಿದ್ದು ಸರ್ವಾನುಮತದ ಆಯ್ಕೆಯ ಯತ್ನಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ.