ಮೈಸೂರು– ಮಹಾರಾಷ್ಟ್ರ ಗಡಿ ವಿವಾದ ವನ್ನು ಪ್ರಸ್ತಾಪಿಸಿದ ಅವರು, ‘ಮಹಾರಾಷ್ಟ್ರದಲ್ಲಿರುವ ಕನ್ನಡ ಮಾತನಾಡುವ ಜನರಾಗಲಿ ಅಥವಾ ಮೈಸೂರು ರಾಜ್ಯದ ಗಡಿ ಪ್ರದೇಶದಲ್ಲಿರುವ ಮರಾಠಿ ಮಾತನಾಡುವ ಜನರಾಗಲಿ ಈ ಗಡಿವಿವಾದಕ್ಕೆ ಹೆಚ್ಚಿನ ಮಹತ್ವ ಕೊಟ್ಟಿಲ್ಲ. ಆದರೆ, ರಾಜಕಾರಣಿಗಳ ಕಾರಣ ಈ ವಿವಾದ ಗಳು ಭಾವೋದ್ವೇಗ ಪಡೆದಿವೆ’ ಎಂದರು.