ಅಕ್ಕಿ, ಗೋದಿ, ರಾಗಿ, ಜೋಳ, ಖಾದ್ಯತೈಲ, ವನಸ್ಪತಿ, ಸಕ್ಕರೆ ಮುಂತಾದ ನಿತ್ಯೋಪಯೋಗಿ ವಸ್ತುಗಳನ್ನು ನೌಕರರಿಗೆ ಒದಗಿಸುವುದಕ್ಕಾಗಿ ‘ಖರೀದಿ ಮತ್ತು ಮಾರಾಟ ಸಂಸ್ಥೆ’ಯೊಂದನ್ನು ರಚಿಸಬೇಕೆಂಬ ರಾಜ್ಯ ಸರ್ಕಾರಿ ನೌಕರರ ಸಂಘದ ಸಲಹೆಯನ್ನು ಅಂಗೀಕರಿಸಿದ ಹಣಕಾಸು ಸಚಿವರು, ಆ ಬಗ್ಗೆ ಯೋಜನೆಯನ್ನು ಕಾರ್ಯಗತಗೊಳಿಸಲು ವಿವರಗಳನ್ನು ಸಿದ್ಧಗೊಳಿಸುವಂತೆ ಹಣಕಾಸು ಇಲಾಖೆಯ ಕಮಿಷನರ್ ಅವರಿಗೆ ಸೂಚನೆ ಇತ್ತಿದ್ದಾರೆಂದು ಸಂಘದ ಅಧ್ಯಕ್ಷ ಕೆ.ಎ.ಕೇಶವಮೂರ್ತಿ ಅವರು ಇಂದು ವರದಿಗಾರರಿಗೆ ತಿಳಿಸಿದರು.