ಗಾಂಧಿನಗರದಲ್ಲಿ ಹಿಂಸಾಚರಣೆಯಲ್ಲಿ ತೊಡಗಿದ್ದ ಗುಂಪು ಚದುರಿಸಲು ಲಾಠಿ ಮತ್ತು ಅಶ್ರುವಾಯು ವಿಫಲವಾದಾಗ ಗುಂಡು ಹಾರಿಸಲಾಯಿತು. ಸಮಾಜಘಾತುಕ ವ್ಯಕ್ತಿಗಳ ಗುಂಪು ಕರ್ಫ್ಯೂ ಆಜ್ಞೆಯನ್ನು ಉಲ್ಲಂಘಿಸಿ, ಟೌನಿನಲ್ಲಿ ಒಂದು ಶ್ರೀಮಂತ ಚಿತ್ರಮಂದಿರ ಮತ್ತು ಅಂಚೆ ಕಚೇರಿಗೆ ಬೆಂಕಿ ಹಚ್ಚಿತೆಂದು ವರದಿಯಾಗಿದೆ. ಅಲ್ಲದೆ ಉದ್ರಿಕ್ತ ಗುಂಪು ಹಲವಾರು ಕಡೆ ಲೂಟಿ ಸಹ ಮಾಡಿತೆಂದೂ ತಿಳಿದುಬಂದಿದೆ.