ರಾಜಮಹೇಂದ್ರಿ, ಜ. 23– ಪ್ರತ್ಯೇಕ ಆಂಧ್ರ ರಚನೆ ಬೇಡಿಕೆ ಈಡೇರಿಕೆಗಾಗಿ ಚಳವಳಿ ತೀವ್ರಗೊಳಿಸುವ ಕಾರ್ಯಕ್ರಮದ ಅಂಗವಾಗಿ, ಮಾಜಿ ಉಪ ಮುಖ್ಯಮಂತ್ರಿ ಬಿ.ವಿ. ಸುಬ್ಬಾರೆಡ್ಡಿಯವರ ಆತ್ಮಾರ್ಪಣೆ ಬೆದರಿಕೆ, ಗಣರಾಜ್ಯ ದಿನದಂದು ಆಂಧ್ರ ಬಂದ್, ನಿಷೇಧಾಜ್ಞೆಗಳ ಉಲ್ಲಂಘನೆಗೆ ಸಾಮೂಹಿಕ ಕಾರ್ಯಕ್ರಮಗಳು– ಇವನ್ನು ಆಂಧ್ರ ಜಂಟಿ ಕ್ರಿಯಾ ಸಮಿತಿ ಪ್ರಕಟಿಸಿದೆ.