ಹೈದರಾಬಾದ್, ಜ. 28– ಆಂಧ್ರ ವಿಭಾಗದ ಇಬ್ಬರು ಪ್ರತ್ಯೇಕವಾದಿ ಸಂಸತ್ ಸದಸ್ಯರು ಶನಿವಾರ ರಾತ್ರಿ ತೆಲಂಗಾಣ ನಾಯಕ ಡಾ. ಎಂ. ಚೆನ್ನಾರೆಡ್ಡಿ ಅವರನ್ನು ಭೇಟಿ ಮಾಡಿ ರಾಜ್ಯ ವಿಭಜನೆಗೆ ಸಂಬಂಧಿಸಿದಂತೆ ಚರ್ಚಿಸಲು ಆಂಧ್ರ ಮತ್ತು ತೆಲಂಗಾಣ ವಿಭಾಗಗಳ ಸಂಸತ್ ಸದಸ್ಯರ ಸಂಯುಕ್ತ ಸಭೆ ಏರ್ಪಡಿಸುವ ಬಗ್ಗೆ ಮಾತುಕತೆ ನಡೆಸಿದರೆಂದು ತಿಳಿದುಬಂದಿದೆ.