‘ಸಮಕಾಲೀನ ಜಗತ್ತಿನಲ್ಲಿ ಸಾಮಾಜಿಕ ಪರಿವರ್ತನೆ, ಸ್ವಾತಂತ್ರ್ಯ ಮತ್ತು ಸಾಮ್ರಾಜ್ಯ ಶಾಹಿ’ ಕುರಿತ ಅಂತರರಾಷ್ಟ್ರೀಯವಿಚಾರಗೋಷ್ಠಿಯಲ್ಲಿ ಭಾಗವಹಿಸಿರುವ ವಿದೇಶಿ ಪ್ರತಿನಿಧಿಯೊಬ್ಬರಿಗೆ ಉತ್ತರ ಕೊಡುತ್ತಿದ್ದ ಪ್ರಧಾನಿ ಅವರು ‘ಭಾದತದ ಅವಿಭಾಜ್ಯ ಭಾಗವಾಗಿರುವ ಜಮ್ಮು– ಕಾಶ್ಮೀರದ ಜನರು ರಾಷ್ಟ್ರದ ಜೀವನ ಹಾಗೂ ಆಶೋತ್ತರಗಳಲ್ಲಿ ಪಾಲ್ಗೊಂಡಿದ್ದಾರೆ. ತಪ್ಪು ದಾರಿಗೆಳೆಯಲ್ಪಟ್ಟಿರುವ, ತೀರಾ ಅತ್ಯಲ್ಪ ಜನರು ಮಾತ್ರ ಸ್ವಯಂ–ನಿರ್ಣಯಾಧಿಕಾರದ ಹಕ್ಕು ಕೇಳಿದ್ದಾರೆ’ ಎಂದರು.