<p><strong>ಪ್ರಣಾಳಿಕೆ: ವ್ಯಾಪಕ ಆರ್ಥಿಕ–ಸಾಮಾಜಿಕ ಸುಧಾರಣೆಗಳ ಭರವಸೆ</strong></p>.<p><strong>ನವದೆಹಲಿ, ಜ. 24–</strong> ವ್ಯಾಪಕವಾದ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆ ಗಳನ್ನು ಮಾಡುವುದಾಗಿ ಆಡಳಿತ ಕಾಂಗ್ರೆಸ್ ಪಕ್ಷವು ರಾಷ್ಟ್ರದ ಮತದಾರರಿಗೆ ಆಶ್ವಾಸನೆ ನೀಡಿದೆ.</p>.<p>ನ್ಯಾಯಾಲಯದ ಇತ್ತೀಚಿನ ತೀರ್ಪುಗಳ ರೂಪದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆ ಕ್ರಮಗಳಿಗೆ ಉಂಟಾಗಿರುವ ಅಡಚಣೆಗಳ ನಿವಾರಣೆಗೆ ಅಗತ್ಯವಾದ ‘ಸಂವಿಧಾನಾತ್ಮಕ ಪರಿಹಾರ ಕ್ರಮಗಳನ್ನೂ’ ಕೈಗೊಳ್ಳುವುದಾಗಿ ಭರವಸೆಯಿತ್ತಿದೆ.</p>.<p>ಇಂದು ಇಲ್ಲಿ ಬಿಡುಗಡೆ ಮಾಡಲಾದ ಹನ್ನೆರಡು ಅಂಶಗಳ ಆಡಳಿತ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಈ<br />ಭರವಸೆಗಳನ್ನು ನೀಡಲಾಗಿದೆ.</p>.<p><strong>ಗೂಢಚರ್ಯೆ ಆರೋಪ: ಭಾರತದಿಂದ ಪಾಕ್ ಅಧಿಕಾರಿ ಉಚ್ಚಾಟನೆ</strong></p>.<p><strong>ನವದೆಹಲಿ, ಜ. 24– </strong>ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ನಿನ ಪ್ರಥಮ ಕಾರ್ಯ ದರ್ಶಿ ಜಾಫರ್ ಇಕ್ಬಾಲ್ ರಾಥೋಡ್ ಅವರನ್ನು ಅನಪೇಕ್ಷಿತ ವ್ಯಕ್ತಿ ಎಂದು ಕೇಂದ್ರ ಸರ್ಕಾರವು ಇಂದು ಘೋಷಿಸಿ, ಅವರು ನಲವತ್ತೆಂಟು ಗಂಟೆಗಳಲ್ಲಿ ಭಾರತವನ್ನು ಬಿಡಬೇಕೆಂದು ಆಜ್ಞೆ ಮಾಡಿದೆ.</p>.<p>ಜಮ್ಮು ಕಾಶ್ಮೀರದಲ್ಲಿ ಗುಪ್ತ ಅಲ್ಫತಾ ಸಂಸ್ಥೆಯ ವ್ಯವಸ್ಥೆ ಮತ್ತು ನಿರ್ದೇಶನದಲ್ಲಿ ರಾಥೋಡ್ ಸಕ್ರಿಯ ಪಾತ್ರ ವಹಿಸಿದ್ದರಲ್ಲದೆ ವಿಧ್ವಂಸಕ ಚಟುವಟಿಕೆಗಳಿಗೆ ನೆರವಾಗಿ ಗೂಢಚರ್ಯೆ ನಡೆಸುತ್ತಿದ್ದರೆಂದು ಆರೋಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪ್ರಣಾಳಿಕೆ: ವ್ಯಾಪಕ ಆರ್ಥಿಕ–ಸಾಮಾಜಿಕ ಸುಧಾರಣೆಗಳ ಭರವಸೆ</strong></p>.<p><strong>ನವದೆಹಲಿ, ಜ. 24–</strong> ವ್ಯಾಪಕವಾದ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆ ಗಳನ್ನು ಮಾಡುವುದಾಗಿ ಆಡಳಿತ ಕಾಂಗ್ರೆಸ್ ಪಕ್ಷವು ರಾಷ್ಟ್ರದ ಮತದಾರರಿಗೆ ಆಶ್ವಾಸನೆ ನೀಡಿದೆ.</p>.<p>ನ್ಯಾಯಾಲಯದ ಇತ್ತೀಚಿನ ತೀರ್ಪುಗಳ ರೂಪದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆ ಕ್ರಮಗಳಿಗೆ ಉಂಟಾಗಿರುವ ಅಡಚಣೆಗಳ ನಿವಾರಣೆಗೆ ಅಗತ್ಯವಾದ ‘ಸಂವಿಧಾನಾತ್ಮಕ ಪರಿಹಾರ ಕ್ರಮಗಳನ್ನೂ’ ಕೈಗೊಳ್ಳುವುದಾಗಿ ಭರವಸೆಯಿತ್ತಿದೆ.</p>.<p>ಇಂದು ಇಲ್ಲಿ ಬಿಡುಗಡೆ ಮಾಡಲಾದ ಹನ್ನೆರಡು ಅಂಶಗಳ ಆಡಳಿತ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಈ<br />ಭರವಸೆಗಳನ್ನು ನೀಡಲಾಗಿದೆ.</p>.<p><strong>ಗೂಢಚರ್ಯೆ ಆರೋಪ: ಭಾರತದಿಂದ ಪಾಕ್ ಅಧಿಕಾರಿ ಉಚ್ಚಾಟನೆ</strong></p>.<p><strong>ನವದೆಹಲಿ, ಜ. 24– </strong>ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ನಿನ ಪ್ರಥಮ ಕಾರ್ಯ ದರ್ಶಿ ಜಾಫರ್ ಇಕ್ಬಾಲ್ ರಾಥೋಡ್ ಅವರನ್ನು ಅನಪೇಕ್ಷಿತ ವ್ಯಕ್ತಿ ಎಂದು ಕೇಂದ್ರ ಸರ್ಕಾರವು ಇಂದು ಘೋಷಿಸಿ, ಅವರು ನಲವತ್ತೆಂಟು ಗಂಟೆಗಳಲ್ಲಿ ಭಾರತವನ್ನು ಬಿಡಬೇಕೆಂದು ಆಜ್ಞೆ ಮಾಡಿದೆ.</p>.<p>ಜಮ್ಮು ಕಾಶ್ಮೀರದಲ್ಲಿ ಗುಪ್ತ ಅಲ್ಫತಾ ಸಂಸ್ಥೆಯ ವ್ಯವಸ್ಥೆ ಮತ್ತು ನಿರ್ದೇಶನದಲ್ಲಿ ರಾಥೋಡ್ ಸಕ್ರಿಯ ಪಾತ್ರ ವಹಿಸಿದ್ದರಲ್ಲದೆ ವಿಧ್ವಂಸಕ ಚಟುವಟಿಕೆಗಳಿಗೆ ನೆರವಾಗಿ ಗೂಢಚರ್ಯೆ ನಡೆಸುತ್ತಿದ್ದರೆಂದು ಆರೋಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>