ಬೆಂಗಳೂರು, ಜ. 29– ‘ರಾಷ್ಟ್ರೀಯ ಕಾಂಗ್ರೆಸ್ನ ಧೋರಣೆಗಳನ್ನು ಕಾರ್ಯರೂಪಕ್ಕೆ ತರುವ ಕಾರ್ಯದಲ್ಲಿ ಪ್ರಧಾನಿಯನ್ನು ಬಲಗೊಳಿಸುವ ಉದ್ದೇಶದಿಂದ’ ಹಳೆಯ ಮೈಸೂರಿನ ಹಿರಿಯ ಕಾಂಗ್ರೆಸ್ ನಾಯಕರಲ್ಲೊಬ್ಬರಾದ ಶ್ರೀ ಜಿ.ನಾರಾಯಣಗೌಡ ಅವರ ನಾಯಕತ್ವದಲ್ಲಿ ಇಂದು, ಅವರೂ ಸೇರಿ ಕೋಲಾರ ಜಿಲ್ಲೆಯ ನಾಲ್ಕು ಮಂದಿ ಶಾಸಕರು ಸಂಸ್ಥಾ ಕಾಂಗ್ರೆಸ್ಸಿಗೆ ರಾಜೀನಾಮೆಯಿತ್ತು ಆಡಳಿತ ಕಾಂಗ್ರೆಸ್ಸಿಗೆ ಸೇರಿದರು.