ನ್ಯೂಯಾರ್ಕ್, ಡಿ. 27– ಇತ್ತೀಚಿನ ಭಾರತ– ಪಾಕಿಸ್ತಾನ ಸಮರದಲ್ಲಿ ಭಾರತವು ರಷ್ಯಾದ ಒತ್ತಡಕ್ಕೆ ಮಣಿದು ಕದನವಿರಾಮ ಜಾರಿಗೆ ತಂದಿತೆಂಬ ಅಮೆರಿಕದ ಸಲಹೆಯನ್ನು ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ವಿಚಿತ್ರ ಹಾಗೂ ಅರ್ಥಹೀನ ಎಂದು ತಳ್ಳಿಹಾಕಿದರು.
‘ನಾನು ಯಾರೊಬ್ಬರ ಅಥವಾ ಯಾವುದೇ ರಾಷ್ಟ್ರದ ಒತ್ತಡಕ್ಕೆ ಮಣಿಯು ವವಳಲ್ಲ’ ಎಂದು ಅವರು ಟೈಂ ಮತ್ತು ನ್ಯೂಸ್ ಪತ್ರಿಕೆಗಳಿಗೆ ನೀಡಿರುವ ಸಂದರ್ಶನದಲ್ಲಿ ಘೋಷಿಸಿದ್ದಾರೆ.
ಬಾಂಗ್ಲಾ ಸಂಪುಟದ ವಿಸ್ತರಣೆ: ಐವರು ಹೊಸ ಸಚಿವರ ನೇಮಕ
ಢಾಕಾ, ಡಿ. 27– ತಾಜುದ್ದೀನ್ ನೇತೃತ್ವದ ಬಾಂಗ್ಲಾದೇಶ ನಾಲ್ವರು ಸದಸ್ಯರ ಸಂಪುಟಕ್ಕೆ ಇಂದು ಐವರು ಹೊಸ ಸಚಿವರನ್ನು ಸೇರಿಸಿಕೊಂಡು ವಿಸ್ತರಿಸಲಾಯಿತು.