ಸಚಿವ ಸಂಪುಟ ಸಭೆಯನ್ನು ಮುಗಿಸಿ ಬಂದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಾನೂನು ಮತ್ತು ಸುವ್ಯವಸ್ಥೆಗೆ ಭದ್ರತಾ ವ್ಯವಸ್ಥೆ ಬಿಟ್ಟರೆ ಸರ್ಕಾರದ ಪಾತ್ರ ಏನಿಲ್ಲ. ಇದು ಸಂಪೂರ್ಣ ಖಾಸಗೀ ಹಾಗೂ ವಾಣಿಜ್ಯ ವ್ಯಾಪ್ತಿಗೆ ಬರುವ ಕಾರ್ಯಕ್ರಮ. ವಿದೇಶಗಳಿಂದ ಜನ ಬರುವಾಗ ಅವರಿಗೆ ಭದ್ರತೆ ನೀಡುವುದು ಸರ್ಕಾರದ ಕರ್ತವ್ಯ. ಈ ಸಂದರ್ಭದಲ್ಲಿ ಕೆಲವು ದೇಶಗಳ ಪ್ರಮುಖರು ಭಾಗವಹಿಸುವ ಸಂಭವವಿದೆ ಎಂದರು.