ದೇವಾಲಯಗಳ ಮುಂದೆ ‘ಪೆರಿಯಾರ್’ ಪಿಕೆಟಿಂಗ್
ಮದ್ರಾಸ್, ಮೇ 28– ‘ಸಾಮಾಜಿಕ ವ್ಯಾಧಿಗಳ’ ನಿವಾರಣೆ ಮತ್ತು ‘ಕಂದಾಚಾರದ’ ನಿರ್ಮೂಲನ ಕ್ಕಾಗಿ ತಮಿಳುನಾಡಿನ ಏಳು ಮುಖ್ಯ ದೇವಾಲಗಳ ಪೈಕಿ ಆರರ ಮುಂದೆ ‘ಅಹಿಂಸಾತ್ಮಕ’ ಪಿಕೆಟಿಂಗ್ ಸಂಘಟಿಸುವುದಾಗಿ ದ್ರಾವಿಡಕಳಗಂ ನಾಯಕ ಇ.ವಿ.ರಾಮಸ್ವಾಮಿ ನಾಯಕರ್ ಅವರು ಇಂದು ಪ್ರಕಟಿಸಿದರು.