ನ್ಯೂಯಾರ್ಕ್, ಮೇ 14– ಭಾರತ– ಪಾಕಿಸ್ತಾನಗಳ ನಡುವೆ ಮುಂಬರುವ ಶೃಂಗಸಭೆಯಲ್ಲಿ ಆಗಬಹುದಾದ ಯಾವುದೇ ಒಪ್ಪಂದದಲ್ಲಿ ಎರಡೂ ದೇಶಗಳ ನಡುವೆ ಚಿರಶಾಂತಿ ನೆಲೆಸುವ ಅಂಶಗಳನ್ನು ಅಡಕವಾಗಿರಬೇಕು ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ಅಮೆರಿಕದ ಟೆಲಿವಿಷನ್ ವೀಕ್ಷಕರಿಗೆ ತಿಳಿಸಿದರು.
ಭಾರತವು ಚಿರಶಾಂತಿಗಾಗಿ ಕ್ರಮಕ್ರಮವಾಗಿ ಯತ್ನಿಸುತ್ತಿತ್ತು. ಆದರೆ, ಇದು ಫಲಪ್ರದವಾಗಿಲ್ಲ. ಪಾಕಿಸ್ತಾನದ ಸರ್ಕಾರ ಮತ್ತು ಜನತೆ ಶಾಂತಿ ಬಯಸುವುದೇ ಆದರೆ ಅದು ಖಚಿತವಾಗಿ ದೊರೆಯುತ್ತದೆ ಎಂದು ಅವರು ಘೋಷಿಸಿದರು.