ಬೆಂಗಳೂರು, ಆಗಸ್ಟ್ 13– ಅರಮನೆಗಳನ್ನು ಪರಭಾರೆ ಮಾಡುವ ಅಧಿಕಾರವನ್ನು ಮೈಸೂರು ಮಾಜಿ ಮಹಾರಾಜರಿಗೆ ಕೇಂದ್ರವು ನೀಡುವ ನಿರೀಕ್ಷೆ ಇದೆ.
ಅರಮನೆ ವಿಷಯದ ಬಗ್ಗೆ ಕೇಂದ್ರದೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರು, ‘ಇಡೀ ವಿಷಯವನ್ನು ಕೇಂದ್ರಕ್ಕೆ ತಿಳಿಸಿದ್ದೇನೆ’ ಎಂದು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು. ಅರಸುರವರು ಇಂದು ದೆಹಲಿಯಿಂದ ಹಿಂತಿರುಗಿದರು.
‘ಪರಭಾರೆ ಮಾಡಲು ಮಹಾರಾಜರಿಗೆ ಅಧಿಕಾರ ನೀಡದೆ ಸರ್ಕಾರ ಸ್ವಾಧಿನಪಡಿಸಿಕೊಳ್ಳುವುದಾದರೂ ಹೇಗೆ ಎಂದು ಅವರು (ಕೇಂದ್ರ ಸರ್ಕಾರ) ಕೇಳುತ್ತಾರೆ’ ಎಂದು ಅರಸು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.