ಬಡತನ ನಿವಾರಣೆಗಾಗಿ ಸಮ್ಮಿಳಿತ ಯತ್ನಕ್ಕೆ ರಾಷ್ಟ್ರಪತಿ ಗಿರಿ ಕರೆ
ನವದೆಹಲಿ, ಆಗಸ್ಟ್ 14– ಬಡತನ ಸಮಸ್ಯೆ ಎದುರಿಸುವುದರಲ್ಲಿ ಯುದ್ಧಕಾಲದ ಚಟುವಟಿಕೆಗಳಿಂದ ವಿವೇಚಿತ ಮತ್ತು ಸಂಯುಕ್ತ ಪ್ರಯತ್ನ ನಡೆಸಬೇಕೆಂದು ರಾಷ್ಟ್ರಪತಿ ವಿ.ವಿ. ಗಿರಿ ಅವರು ರಾಷ್ಟ್ರದ ಪ್ರತೀ ವ್ಯಕ್ತಿಗೂ ಕರೆ ನೀಡಿದರು.
ಇಂದು ಮಧ್ಯರಾತ್ರಿ 12 ಗಂಟೆಗೆ ಸ್ವಲ್ಪ ಮುಂಚೆ ಚರಿತ್ರಾರ್ಹ ಪಾರ್ಲಿಮೆಂಟ್ ಕೇಂದ್ರ ಭವನದಿಂದ ಸ್ವಾತಂತ್ರ್ಯೋತ್ಸವ ಬೆಳ್ಳಿಹಬ್ಬದ ಸಂದೇಶ ನೀಡಿದ ರಾಷ್ಟ್ರಪತಿಗಳು, ಆದಷ್ಟು ಎಚ್ಚರಿಕೆಯಿಂದಲೂ ಮತ್ತು ಆದಷ್ಟು ಸರಳ ವಿಧಾನಗಳಿಂದಲೂ ಬಡತನ ಹತ್ತಿಕ್ಕುವ ಅಗಾಧ ಹೊಣೆ ನಿರ್ವಹಿಸಬೇಕೆಂದು ಹೇಳಿದರು.