* ರಾಜ್ಯ ಸಂಪುಟದಲ್ಲಿ ಸ್ವಲ್ಪವೂ ಒಡಕಿಲ್ಲ: ಅರಸು ಸ್ಪಷ್ಟನೆ
ಬೆಂಗಳೂರು, ಆಗಸ್ಟ್ 20– ರಾಜ್ಯ ಸಚಿವರೂ ಸೇರಿ ತಮ್ಮ ಸಚಿವ ಸಹೋದ್ಯೋಗಿಗಳು ಒಗ್ಗಟ್ಟಿ ನಿಂದ ಇದ್ದಾರೆ. ಯಾವುದೇ ಸಂದರ್ಭದಲ್ಲೂ ಸಂದೇಹಪಡಲು ತಮಗೆ ಕಾರಣವೇ ಇಲ್ಲವೆಂದು ಮುಖ್ಯಮಂತ್ರಿ ಡಿ. ದೇವರಾಜ ಅರಸು ಸ್ಪಷ್ಟಪಡಿಸಿದರು.
‘ರಾಜಕೀಯ ಶುದ್ಧೀಕರಣ’ ಚಳವಳಿ ಆರಂಭಿಸಲಿರುವ ಕೆಂಗಲ್ ಹನುಮಂತಯ್ಯ ಅವರನ್ನು ಶಾಸಕರು, ಕೆಲ ಸಚಿವರೂ ಬಂದು ನೋಡಿದ್ದಾರೆ ಎಂದು ಹೇಳಿರುವುದನ್ನು ವರದಿಗಾರರು ಪ್ರಸ್ತಾಪಿಸಿದಾಗ ‘ಸಚಿವರು ಹನು ಮಂತಯ್ಯ ಅವರನ್ನು ಹೋಗಿ ನೋಡಿಲ್ಲ ಎಂದು ಹೇಳುವುದಿಲ್ಲ. ಹೋಗಿರಬಹುದು’ ಎಂದರು.