ನವದೆಹಲಿ,ಅಕ್ಟೋಬರ್ 22– ಪುದುಚೇರಿಯ ಲೆಫ್ಟಿನೆಂಟ್ ಗೌರ್ನರ್ ಬಿ.ಡಿ. ಜತ್ತಿಯವರು ಒರಿಸ್ಸಾದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆಂದು ಇಂದು ಇಲ್ಲಿ ರಷ್ಟ್ರಭವನದ ಪ್ರಕಟಣೆ ತಿಳಿಸಿದೆ.
ಮಾಜಿ ಸಂಸತ್ ಸದಸ್ಯರಾದ ಆಂಧ್ರಪ್ರದೇಶದ ಅಕ್ಬರ್ ಅಲೀ ಖಾನ್ ಅವರು ಉತ್ತರಪ್ರದೇಶದ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆಂದು ಪ್ರಕಟಣೆ ತಿಳಿಸಿದೆ. ಅಕ್ಬರ್ ಅಲೀ ಖಾನ್ ಅವರು 2 ತಿಂಗಳ ಹಿಂದೆ ನಿವೃತ್ತಿ ಹೊಂದಿದ ಬಿ. ಗೋಪಾಲ್ ರೆಡ್ಡಿಯವರ ಸ್ಥಾನದಲ್ಲಿ ನೇಮಕಗೊಂಡಿದ್ದಾರೆ.