<p><strong>ಕಾರ್ಮಿಕರ ಕಲ್ಯಾಣ</strong></p><p>ಸ್ವಾತಂತ್ರ್ಯನಂತರ ಭಾರತದಲ್ಲಿ ಕಾರ್ಮಿಕರ ಹಿತರಕ್ಷಣೆಗಾಗಿ ಬೇಕಾದಷ್ಟು ಶಾಸನಗಳಿವೆ. ಅವುಗಳೆಲ್ಲವನ್ನೂ ಕಾರ್ಯಗತ ಮಾಡುವುದರಲ್ಲಿ ಅಲ್ಲೊಂದು, ಇಲ್ಲೊಂದು ಲೋಪವಾಗಿರಬಹುದಾದರೂ ಒಟ್ಟಿನಲ್ಲಿ ಈ ಕಾನೂನುಗಳು ಕಾರ್ಮಿಕನಿಗೆ ಸಾಕಷ್ಟು ರಕ್ಷಣೆಯನ್ನು ಒದಗಿಸಿವೆ. ಆದರೂ ಕಾರ್ಮಿಕ ಇನ್ನೂ ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆಂಬುದು ನಿರ್ವಿವಾದ. ಅದರಲ್ಲಿಯೂ ವಸತಿ ಮತ್ತು ಮಕ್ಕಳ ವಿದ್ಯಾಭ್ಯಾಸದಂತಹ ಸಮಸ್ಯೆಗಳು ಕಾರ್ಮಿಕನನ್ನು ಸಾಕಷ್ಟು ಮಟ್ಟಿಗೆ ಕಾಡುತ್ತಿವೆ. ಈ ಹಿನ್ನಲೆಯಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಸಾಕಷ್ಟು ಹಣ ಒದಗಿಸುವುದಕ್ಕೆ ಶಾಸನಗಳನ್ನು ಮಾರ್ಪಾಟು ಮಾಡಲು ರಾಜ್ಯ ಸರಕಾರ ಆಲೋಚಿ ಸುತ್ತಿದೆಯೆಂಬ ಕಾರ್ಮಿಕ ಸಚಿವ ಎಸ್. ಎಂ. ಯಾಹ್ಯಾರವರ ಹೇಳಿಕೆ ತುಂಬ ಗಮ ನಾರ್ಹವಾದುದು. </p><p>ತಿದ್ದುಪಡಿಯಂತೆ ಕಾರ್ಮಿಕರ ಕಲ್ಯಾಣ ನಿಧಿಗಾಗಿ ಕಾರ್ಮಿಕರು ಮತ್ತು ಮಾಲೀಕರಿಂದ ಕಾಣಿಕೆ ಪಡೆಯುವುದರ ಜೊತೆಗೆ ಸರಕಾರವೂ ಒಂದು ಭಾಗ ನೀಡುವುದು. ಮೂವರ ಹೊಣೆಯ ಸೇರುವುದರಿಂದ ಕಾರ್ಮಿಕರ ಕಲ್ಯಾಣದ ಬಗ್ಗೆ ಸಂಬ೦ಧಪಟ್ಟವರೆಲ್ಲರೂ ತಾದಾತ್ಮ್ಯ, ಹೊಂದಿದಂತಾಗುತ್ತದೆ. ಈ ನಿಧಿಯಿಂದ ಕಾರ್ಮಿಕರ ಕೆಲ ಮೂಲಭೂತವಾದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದರ ಜೊತೆಗೆ ಪರಸ್ಪರ ಅರಿವಿನಿಂದ ಕೈಗಾರಿಕಾ ಶಾಂತಿ ಕಾಪಾಡುವುದಕ್ಕೂ ಸಹಾಯಕವಾಗಬಲ್ಲದೆಂದು ನಿರೀಕ್ಷಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರ್ಮಿಕರ ಕಲ್ಯಾಣ</strong></p><p>ಸ್ವಾತಂತ್ರ್ಯನಂತರ ಭಾರತದಲ್ಲಿ ಕಾರ್ಮಿಕರ ಹಿತರಕ್ಷಣೆಗಾಗಿ ಬೇಕಾದಷ್ಟು ಶಾಸನಗಳಿವೆ. ಅವುಗಳೆಲ್ಲವನ್ನೂ ಕಾರ್ಯಗತ ಮಾಡುವುದರಲ್ಲಿ ಅಲ್ಲೊಂದು, ಇಲ್ಲೊಂದು ಲೋಪವಾಗಿರಬಹುದಾದರೂ ಒಟ್ಟಿನಲ್ಲಿ ಈ ಕಾನೂನುಗಳು ಕಾರ್ಮಿಕನಿಗೆ ಸಾಕಷ್ಟು ರಕ್ಷಣೆಯನ್ನು ಒದಗಿಸಿವೆ. ಆದರೂ ಕಾರ್ಮಿಕ ಇನ್ನೂ ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆಂಬುದು ನಿರ್ವಿವಾದ. ಅದರಲ್ಲಿಯೂ ವಸತಿ ಮತ್ತು ಮಕ್ಕಳ ವಿದ್ಯಾಭ್ಯಾಸದಂತಹ ಸಮಸ್ಯೆಗಳು ಕಾರ್ಮಿಕನನ್ನು ಸಾಕಷ್ಟು ಮಟ್ಟಿಗೆ ಕಾಡುತ್ತಿವೆ. ಈ ಹಿನ್ನಲೆಯಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಸಾಕಷ್ಟು ಹಣ ಒದಗಿಸುವುದಕ್ಕೆ ಶಾಸನಗಳನ್ನು ಮಾರ್ಪಾಟು ಮಾಡಲು ರಾಜ್ಯ ಸರಕಾರ ಆಲೋಚಿ ಸುತ್ತಿದೆಯೆಂಬ ಕಾರ್ಮಿಕ ಸಚಿವ ಎಸ್. ಎಂ. ಯಾಹ್ಯಾರವರ ಹೇಳಿಕೆ ತುಂಬ ಗಮ ನಾರ್ಹವಾದುದು. </p><p>ತಿದ್ದುಪಡಿಯಂತೆ ಕಾರ್ಮಿಕರ ಕಲ್ಯಾಣ ನಿಧಿಗಾಗಿ ಕಾರ್ಮಿಕರು ಮತ್ತು ಮಾಲೀಕರಿಂದ ಕಾಣಿಕೆ ಪಡೆಯುವುದರ ಜೊತೆಗೆ ಸರಕಾರವೂ ಒಂದು ಭಾಗ ನೀಡುವುದು. ಮೂವರ ಹೊಣೆಯ ಸೇರುವುದರಿಂದ ಕಾರ್ಮಿಕರ ಕಲ್ಯಾಣದ ಬಗ್ಗೆ ಸಂಬ೦ಧಪಟ್ಟವರೆಲ್ಲರೂ ತಾದಾತ್ಮ್ಯ, ಹೊಂದಿದಂತಾಗುತ್ತದೆ. ಈ ನಿಧಿಯಿಂದ ಕಾರ್ಮಿಕರ ಕೆಲ ಮೂಲಭೂತವಾದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದರ ಜೊತೆಗೆ ಪರಸ್ಪರ ಅರಿವಿನಿಂದ ಕೈಗಾರಿಕಾ ಶಾಂತಿ ಕಾಪಾಡುವುದಕ್ಕೂ ಸಹಾಯಕವಾಗಬಲ್ಲದೆಂದು ನಿರೀಕ್ಷಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>