ತಿರುವನಂತಪುರ, ಜ. 3– ‘ನಿಮ್ಮ ವಿಶ್ವಾಸದ ಆಹ್ವಾನಕ್ಕೆ ಧನ್ಯವಾದಗಳು. ಆದರೆ, ಚಿತ್ರೋತ್ಸವದಲ್ಲಿ ಭಾಗವಹಿಸಲಾರೆ’. ಕನ್ನಡದ ಮೇರು ನಟ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಡಾ. ರಾಜ್ಕುಮಾರ್ ಅವರು ಕೇರಳದ ಸಂಸ್ಕೃತಿ ಸಚಿವ ಟಿ.ಕೆ. ರಾಮಕೃಷ್ಣನ್ ಅವರಿಗೆ ಬರೆದ ಪತ್ರ. ಡಾ. ರಾಜ್ ಅವರ ಪತ್ರ ಗುರುವಾರ ಸಂಜೆ ಸಚಿವರ ಕಚೇರಿ ತಲುಪಿದೆ.