ಬೆಳಗಾವಿ, ಏ. 6– ಬರುವ ಮಂಗಳವಾರ ಪ್ರಕಟವಾಗಲಿರುವ ಹೊಸ ಜಿಲ್ಲೆಗಳಲ್ಲಿ ಬೆಳಗಾವಿ ಜಿಲ್ಲೆಯಿಂದ ಯಾವುದೇ ಹೊಸ ಜಿಲ್ಲೆಯನ್ನು ಬೇರ್ಪಡಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಇಂದು ಭರವಸೆ ನೀಡುವುದರೊಡನೆ ಗೋಕಾಕ ಬಂದ್ ಅನ್ನು ಮಧ್ಯಾಹ್ನ ವಾಪಸು ತೆಗೆದುಕೊಳ್ಳಲಾಯಿತು. ತಹಶಿಲ್ದಾರ್ ಕಚೇರಿ ಎದುರು ಪ್ರಾರಂಭಗೊಂಡ ಅನಿರ್ದಿಷ್ಟ ನಿರಶನವನ್ನು ಶಾಸಕರು ಕೈಬಿಟ್ಟರು.