ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ – ಶನಿವಾರ, 5–7–1997

Last Updated 4 ಜುಲೈ 2022, 19:30 IST
ಅಕ್ಷರ ಗಾತ್ರ

ಗುಜ್ರಾಲ್‌ ಸಂಧಾನ ವಿಫಲ, ಲಾಲೂ ಹೊಸ ಪಕ್ಷ ಖಚಿತ

ನವದೆಹಲಿ, ಜುಲೈ 4 (ಪಿಟಿಐ)– ಜನತಾ ದಳ ವಿಭಜನೆಯಾಗುವುದನ್ನು ತಡೆಯಲು ಪ್ರಧಾನಿ ಐ.ಕೆ.ಗುಜ್ರಾಲ್ ಅವರು ಇಂದು ರಾತ್ರಿ ನಡೆಸಿದ ಕಡೇ ಗಳಿಗೆ ಯತ್ನ ವಿಫಲವಾಗಿದೆ. ರಾಜಧಾನಿಯಲ್ಲಿ ನಾಳೆ ತಮ್ಮ ಬೆಂಬಲಿಗರ ಸಮಾವೇಶ ನಡೆಸಿಯೇ ತೀರುವುದಾಗಿ ಲಾಲೂ ಪ್ರಸಾದ್‌ ಯಾದವ್ ಅವರು ಪ್ರಕಟಿಸಿ ಹೊಸ ಪಕ್ಷ ರಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇಂದರಿಂದಾಗಿ ಕೇಂದ್ರದ ಸಂಯುಕ್ತ ರಂಗ ಸರ್ಕಾರದ ಪ್ರಮುಖ ಘಟಕ ಪಕ್ಷವಾದ ಜನತಾದಳ ಇಬ್ಭಾಗವಾಗುವುದು ಖಚಿತವಾಗಿದೆ.

ಮಹದೇವ ಗಿರಣಿ ಮುಚ್ಚಲು ನಿರ್ಧಾರ

ಬೆಂಗಳೂರು, ಜುಲೈ 4– ಸುಮಾರು 7 ಕೋಟಿ ರೂಪಾಯಿಗಳಿಗೂ ಮೀರಿ ನಷ್ಟ ಅನುಭವಿಸಿರುವ ಹುಬ್ಬಳ್ಳಿಯ ಮಹದೇವ ಜವಳಿ ಗಿರಣಿಯನ್ನು ಮುಚ್ಚಲು ರಾಜ್ಯ ಸಚಿವ ಸಂಪುಟ ಇಂದು ಇಲ್ಲಿ ತೀರ್ಮಾನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT