ನವದೆಹಲಿ, ಜುಲೈ 4 (ಪಿಟಿಐ)– ಜನತಾ ದಳ ವಿಭಜನೆಯಾಗುವುದನ್ನು ತಡೆಯಲು ಪ್ರಧಾನಿ ಐ.ಕೆ.ಗುಜ್ರಾಲ್ ಅವರು ಇಂದು ರಾತ್ರಿ ನಡೆಸಿದ ಕಡೇ ಗಳಿಗೆ ಯತ್ನ ವಿಫಲವಾಗಿದೆ. ರಾಜಧಾನಿಯಲ್ಲಿ ನಾಳೆ ತಮ್ಮ ಬೆಂಬಲಿಗರ ಸಮಾವೇಶ ನಡೆಸಿಯೇ ತೀರುವುದಾಗಿ ಲಾಲೂ ಪ್ರಸಾದ್ ಯಾದವ್ ಅವರು ಪ್ರಕಟಿಸಿ ಹೊಸ ಪಕ್ಷ ರಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇಂದರಿಂದಾಗಿ ಕೇಂದ್ರದ ಸಂಯುಕ್ತ ರಂಗ ಸರ್ಕಾರದ ಪ್ರಮುಖ ಘಟಕ ಪಕ್ಷವಾದ ಜನತಾದಳ ಇಬ್ಭಾಗವಾಗುವುದು ಖಚಿತವಾಗಿದೆ.