ಮಹಿಳಾ ಮೀಸಲಾತಿ ಮಸೂದೆ ಹಾಗೂ ಚುನಾವಣಾ ಸುಧಾರಣೆ ಕುರಿತ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲಾಲೂ ಪ್ರಸಾದ್ ಯಾದವ್ ಅವರ ಹೆಸರನ್ನು ಹೇಳದೆ, ‘ಮೊಕದ್ದಮೆ ಎದುರಿಸುತ್ತಿರುವ ರಾಜಕಾರಣಿಗಳು ಬಹಿರಂಗ ಮನವಿ ಮಾಡಿಕೊಂಡರೂ ಪದತ್ಯಾಗಕ್ಕೆ ಒಪ್ಪದಿರುವ ಈ ಸನ್ನಿವೇಶದಲ್ಲಿ ಏನು ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.