ಕೊಯಮತ್ತೂರು, ಜುಲೈ 20 (ಪಿಟಿಐ)– ಕರ್ನಾಟಕದ 9 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡಿರುವ ದಂತಚೋರ ವೀರಪ್ಪನ್ ಈಗ ಬರಗೂರು, ಕದಂಬೂರು, ತಲವಾಡಿ ಮತ್ತು ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಸುತ್ತಾಡುತ್ತಿದ್ದಾನೆ ಎಂದು ಅಂದಾಜಿಸಲಾಗಿದ್ದು ಆತನೊಂದಿಗೆ ಸಂಧಾನಕ್ಕಾಗಿ ತಮಿಳುನಾಡು ಸರ್ಕಾರ ನೇಮಿಸಿರುವ ತಂಡ ಈಗ ಅರಣ್ಯ ಪ್ರದೇಶವನ್ನು ಪ್ರವೇಶಿಸಿದೆ.