ಬರಗೂರು ಅರಣ್ಯ ಪ್ರದೇಶ (ತಮಿಳುನಾಡು), ಜುಲೈ 21– ಕಾಡುಗಳ್ಳ ವೀರಪ್ಪನ್ ಜತೆ ಸಂಧಾನವನ್ನು ನಡೆಸಲು ಹೋಗಿರುವ ‘ನಕ್ಕೀರನ್’ ಪತ್ರಿಕೆಯ ಸಂಪಾದಕ ಕೆ.ಆರ್.ಗೋಪಾಲನ್ ಅವರು ಇಂದು ಬರಗೂರು ಅರಣ್ಯ ಪ್ರದೇಶದ ತಾಮ್ರಕೆರೆಯ (ತಾವರೆಕೆರೆ) ಸಮೀಪ ಅರಣ್ಯ ಪ್ರವೇಶಿಸಿರುವುದು ಖಚಿತವಾಗಿದೆ.
ನಾಲ್ರೋಡ್– ಅಂತಿಯೂರು ನಡುವಿನ 60 ಕಿ.ಮೀ. ದೂರದ ಈ ಅರಣ್ಯಪ್ರದೇಶದಲ್ಲಿ ಗೋಪಾಲನ್ ಅವರ ಪ್ರವೇಶಕ್ಕೆ ನೆರವಾಗುವಂತೆ ತಮಿಳುನಾಡು ಈ ಭಾಗದ ಅರಣ್ಯ ಸಿಬ್ಬಂದಿಯನ್ನು ನಿನ್ನೆಯೇ ಕಾಡಿನಿಂದ ನಾಡಿಗೆ ವಾಪಸ್ಸು ಕರೆಸಿಕೊಂಡಿದೆ.