ಬಳ್ಳಾರಿ, ಮೇ 18– ತುಂಗಾ ಮೇಲ್ದಂಡೆ ಯೋಜನೆಗಳ ಕಾಮಗಾರಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.
ತುಂಗಾ ಮೇಲ್ದಂಡೆ ಯೋಜನೆಯ ಜೊತೆಗೆ ಭದ್ರಾ ಹಾಗೂ ತುಂಗಾ ಹೊರಳು ಯೋಜನೆಗಳ ಕಾಮಗಾರಿಯನ್ನೂ ರಾಜ್ಯ ಸರ್ಕಾರ ಶೀಘ್ರವೇ ಕೈಗೆತ್ತಿಕೊಳ್ಳಲಿದ್ದು ಇವುಗಳಿಗೆ ಕೇಂದ್ರದ ಪರವಾನಗಿ ಪಡೆಯುವ ಅಗತ್ಯವೇನಿಲ್ಲವೆಂದು ಅವರು ಸ್ಪಷ್ಟಪಡಿಸಿದರು.
ತೀರ್ಪು ಉಲ್ಲಂಘನೆ: ಕರ್ನಾಟಕದ ವಿರುದ್ಧ ಕ್ರಮ– ನಾಯ್ಡು
ಹೈದರಾಬಾದ್, ಮೇ 18 (ಯುಎನ್ಐ)– ಸತತವಾಗಿ ಬಚಾವತ್ ಆಯೋಗದ ತೀರ್ಪನ್ನು ಉಲ್ಲಂಘನೆ ಮಾಡುತ್ತಿರುವ ಕರ್ನಾಟಕದ ವಿರುದ್ಧ ಇನ್ನು ಕೆಲವೇ ದಿನಗಳಲ್ಲಿ ತಮ್ಮ ಸರ್ಕಾರ ವ್ಯವಸ್ಥಿತ ಕ್ರಮ ಕೈಗೊಳ್ಳಲಿದೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಂದು ಇಲ್ಲಿ ಹೇಳಿದರು.