ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶನಿವಾರ, 22.1.1972

Last Updated 21 ಜನವರಿ 2022, 15:39 IST
ಅಕ್ಷರ ಗಾತ್ರ

ಪಕ್ಷದ ಒಂದು ಗುಂಪಿನ ಪ್ರತಿನಿಧಿ ತಿವಾರಿ ನಗರದ ಹೊಸ ಮೇಯರ್‌

ಬೆಂಗಳೂರು, ಜ.21 – ಮೇಯರ್‌ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಬಾರದೆಂಬ ಪ್ರದೇಶ ಹೈಕಮಾಂಡಿನ ಆದೇಶವನ್ನು ಧಿಕ್ಕರಿಸಿದ ಕಾರ್ಪೋರೇಷನ್‌ ಕಾಂಗ್ರೆಸ್‌ ಪಕ್ಷದ ಒಂದು ಗುಂಪಿನ ಪ್ರತಿನಿಧಿ ಶ್ರೀ. ಎಂ.ವಿ. ತಿವಾರಿ ಅವರು ಇತರರ ಬೆಂಬಲದೊಡನೆ ಇಂದು ನಗರದ ನಗರದ ‘ಪ್ರಥಮ ಪ್ರಜೆ’ ಯಾಗಿ ಚುನಾಯಿತರಾದರು.

ಇದೇ ಗುಂಪಿಗೆ ಸೇರಿದ ಶ್ರೀ ಎನ್‌.ವೆಂಕಟರಾಮ್‌ ಅವರು ಉಪಮೇಯರ್‌ ಆಗಿ ಆಯ್ಕೆಯಾದರು.

ಸದಸ್ಯರೊಬ್ಬರು ತಮ್ಮ ಮತ ನೀಡಿಕೆಯನ್ನು ಬಹಿರಂಗಪಡಿಸಿದ ಸಂದರ್ಭದಲ್ಲಿ ಉಂಟಾದ ಬಿಸಿ ಪ್ರಕರಣವನ್ನು ಸುಧಾರಿಸಲು ಪೊಲೀಸರು ಸಭಾಭವನವನ್ನು ಪ್ರವೇಶಿಸಿದರು.

ಕಾರ್ಪೋರೇಷನ್‌ ಕಾಂಗ್ರೆಸ್‌ ಪಕ್ಷದ ನಾಯಕರಾದ ಶ್ರೀ. ಎಂ.ವಿ. ತಿವಾರಿ ಅವರು 37 ಮತಗಳನ್ನೂ ಕೆಲ ವಿರೋಧ ಪಕ್ಷಗಳ ಪ್ರತಿಸ್ಪರ್ಧಿ ಶ್ರೀ ವರದರಾಜ್‌ ಅವರು 18 ಮತಗಳನ್ನು ಗಳಿಸಿದರು.

ವರದಕ್ಷಿಣೆ ಸ್ವೀಕರರಿಸುವವರು ‘ನಪುಂಸಕರು’

ಬೆಂಗಳೂರು, ಜ.21 – ವಿವಾಹದ ಸಮಯದಲ್ಲಿ ವರದಕ್ಷಿಣೆಯನ್ನು ಸ್ವೀಕರಿಸುವ ವರಗಳು ಉಡುಪಿಯ ಅದಮಾರು ಮಠದ ಶ್ರೀ ವಿಭುದೇಶ ತೀರ್ಥ ಸ್ವಾಮಿಗಳ ಮಾತಿನಲ್ಲಿ ಹೇಳುವುದಾದರೆ ‘ನಪುಂಸಕರು’.

ವರದಕ್ಷಿಣೆ ಸ್ವೀಕಾರ ಪಾಪವೆಂದೂ ಅವರು ಅಭಿಪ್ರಾಯ. ‘ವೈವಾಹಿಕ ಸಂಬಂಧ ಪವಿತ್ರವಾದುದು. ವಿವಾಹದಲ್ಲಿ ಹಣವಾಗಲೀ, ಆಡಂಬರವಾಗಲೀ ಅನಗತ್ಯ’ ಎಂದು ಶ್ರೀಗಳ ಸ್ಪಷ್ಟ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT