ಪಕ್ಷಾಂತರ ನಡೆದಿರುವ ಬಗ್ಗೆ ಅರಸು ಒಪ್ಪಿಗೆ: ಶುದ್ಧೀಕರಣದ ಎಚ್ಚರಿಕೆ
ಬೆಂಗಳೂರು, ಏ.9– ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಲ್ಲಿ ಮತಗಳ ಪಕ್ಷಾಂತರ ನಡೆದಿದೆ ಎಂಬುದನ್ನು ಇಂದು ಇಲ್ಲಿ ಒಪ್ಪಿಕೊಂಡ ಮುಖ್ಯಮಂತ್ರಿ ಶ್ರೀ ಡಿ.ದೇವರಾಜ ಅರಸು ಅವರು,‘ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ಶುದ್ಧೀಕರಣ ಅಗತ್ಯವಾಗುವ ದಿನ ಬರಬಹುದು’ ಎಂದು ಎಚ್ಚರಿಕೆ ನೀಡಿದರು.
ಆಡಳಿತ ಕಾಂಗ್ರೆಸ್ಸಿನ ಸಮಾಜವಾದಿ ವೇದಿಕೆಯು ತಮ್ಮ ಹಾಗೂ ಸಚಿವ ಸಹೋದ್ಯೋಗಿಗಳ ಗೌರವಾರ್ಥ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶುದ್ಧೀಕರಣ ಇಲ್ಲದಿದ್ದಲ್ಲಿ ಇಂಥಾ ಸಡಿಲತೆಗಳಿಂದ ಸಮಾಜವಾದಿ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರಲು ಅಗತ್ಯವಾದ ಐಕ್ಯ ಹಾಗೂ ಶಕ್ತಿ ಪಡೆಯಲು ಸಾಧ್ಯವಾಗದು’ ಎಂದು ಸ್ಪಷ್ಟಪಡಿಸಿದರು.