ಬೆಂಗಳೂರು, ಜುಲೈ 3 – ಬೆಂಗಳೂರು ಡೈರಿಯ ‘ಹಾಲಿನಲ್ಲಿ ಹುಳು’ ಪ್ರಸಂಗ ವ್ಯಾನಿನಲ್ಲಿ ಬರುತ್ತಿದ್ದ ಮೂವರು ಕೆಲಸಗಾರರು ನೀರು ಮತ್ತು ಡಬಲ್ ಟೋನ್ಡ್ ಮಿಲ್ಕ್ ಬೆರೆಸಿ ಅಕ್ರಮ ಮಾಡುತ್ತಿದ್ದ ಪ್ರಕರಣದಿಂದಾಗಿದೆಯೆಂದು ಪತ್ತೆಹಚ್ಚಲಾಗಿದೆಯೆಂದೂ ಆ ಮೂವರು ಕಾರ್ಮಿಕರ ಮೇಲೆ ಕ್ರಮ ಕೈಗೊಳ್ಳಲಾಗಿದೆಯೆಂದೂ ಪಶುಸಂಗೋಪನ ಸಚಿವ ಶ್ರೀ ಎನ್. ಚಿಕ್ಕೇಗೌಡ ಅವರು ಇಂದು ವಿಧಾನಸಭೆಗೆ ವಿವರಣೆ ನೀಡಿದರು.