ಬೆಂಗಳೂರು, ಜುಲೈ 5– ‘ಕೆಲವು ಮಂತ್ರಿಗಳು ಹಿಂದಿನ ಸರಕಾರದ ಮೇಲೆ ಬಸಿ ಬಳಿಯುವ ಒಂದೇ ಕಾರ್ಯಕ್ರಮವನ್ನು ಇರಿಸಿಕೊಂಡಿದ್ದಾರೆ’ ಎಂದು ಟೀಕಿಸಿದ ಮಾಜಿ ಹಣಕಾಸು ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು, ‘ಹಿಂದಿನ ಸರಕಾರ, ಭ್ರಷ್ಟಾಚಾರ, ಅನೀತಿಯ ಕಾರ್ಯಗಳನ್ನೇ ನಡೆಸಿದೆ ಎಂದು ಈಗಿನ ಸರ್ಕಾರ ಭಾವಿಸಿದರೆ, ಹಿಂದಿನ ಸರಕಾರದ ಎಲ್ಲ ಕೆಲಸ ಕಾರ್ಯಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿ’ ಎಂದು ಸವಾಲು ಹಾಕಿದರು.